ಪುತ್ತೂರು: ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿಯವರು ಅರುಣ್ ಕುಮಾರ್ ಪುತ್ತಿಲ ಸ್ಥಾಪಿಸಿರುವ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಮುಕ್ರಂಪಾಡಿ ಕಚೇರಿಗೆ ಜೂ.17 ರಂದು ಭೇಟಿ ನೀಡಿ ಆಶೀರ್ವದಿಸಿದರು.

ಅರುಣ್ ಕುಮಾರ್ ಪುತ್ತಿಲ ಶ್ರೀಗಳ ಪಾದಗಳಿಗೆ ನೀರೆರೆದು, ತುಳಸಿ ಮಾಲೆ ಸಮರ್ಪಣೆ ಮಾಡಿ ಸ್ವಾಗತಿಸಿದರು. ಈ ಸಂದರ್ಭ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷ ಮಹೇಂದ್ರ ವರ್ಮ, ಕಾರ್ಯದರ್ಶಿ ರವಿ ರೈ ಮಠ, ಕೋಶಾಧಿಕಾರಿ ಗಣೇಶ್ ಮಕರಂದ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ನಿವೃತ್ತ ಉಪನ್ಯಾಸಕ ಪಿ ಕೆ ಬಾಲಕೃಷ್ಣ, ನ್ಯಾಯವಾದಿ ಜಯರಾಮ್, ನರಸಿಂಹಪ್ರಸಾದ್, ಅಶೋಕ್ ಪುತ್ತಿಲ, ಶ್ರೀಕಾಂತ್ ಭಟ್, ಮನೀಶ್ ಬನ್ನೂರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
