ಶರವೂರಿನಲ್ಲಿ ’ ಸುದರ್ಶನ ಗರ್ವಭಂಗ’ ಯಕ್ಷಗಾನ ತಾಳಮದ್ದಳೆ

0

ರಾಮಕುಂಜ: ಶ್ರೀ ದುರ್ಗಾಂಬ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಆಲಂಕಾರು ಇದರ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಯಕ್ಷಗಾನ ತಾಳಮದ್ದಳೆ 7ನೇ ಸೇವೆಯಾಗಿ ’ಸುದರ್ಶನ ಗರ್ವಭಂಗ’ ಜೂ.14ರಂದು ಸಂಜೆ ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಚೆಂಡೆ ಮದ್ದಳೆಯಲ್ಲಿ ಚಂದ್ರ ದೇವಾಡಿಗ ನಗ್ರಿ, ಮೋಹನ ಶರವೂರು, ಚಕ್ರತಾಳದಲ್ಲಿ ರಾಮ್‌ಪ್ರಕಾಶ್ ಕೊಡಂಗೆ ಸಹಕರಿಸಿದರು. ಮುಮ್ಮೆಳದಲ್ಲಿ ಬಾಲಕೃಷ್ಣ ಕೇಪುಳು, ರಾಘವೇಂದ್ರ ಭಟ್ ತೋಟಂತಿಲ (ವಿಷ್ಣು), ದಿವಾಕರ ಆಚಾರ್ಯ ಹಳೆನೇರೆಂಕಿ (ಲಕ್ಷ್ಮೀ), ಹರೀಶ್ ಆಚಾರ್ಯ ಬಾರ್ಯ, ಗುರುಪ್ರಸಾದ್ ಆಲಂಕಾರು (ಸುದರ್ಶನ), ಜಯರಾಂ ಗೌಡ ಬಲ್ಯ (ಶತ್ರುಪ್ರಸೂದನ), ರಾಮ್ ಪ್ರಸಾದ್ ಆಲಂಕಾರು (ದೇವೇಂದ್ರ) ಸಹಕರಿಸಿದರು. ಜಯರಾಂ ಗೌಡ ಬಲ್ಯ, ನೆಲ್ಯಾಡಿ ಹಾಗೂ ಮೋಹನ ಶರವೂರು ಸೇವಾರ್ಥಿಗಳಾಗಿ ಸಹಕರಿಸಿದರು.


ಕಲಾಸಂಗಮದ ಕಾರ್ಯದರ್ಶಿ ದಿವಾಕರ ಆಚಾರ್ಯ ಹಳೆನೇರೆಂಕಿ ಸ್ವಾಗತಿಸಿ, ಕೋಶಾಧಿಕಾರಿ ರಾಮ್ ಪ್ರಸಾದ್ ಆಲಂಕಾರು ವಂದಿಸಿದರು. ಸೇವಾರ್ಥಿಗಳಿಗೆ ದೇವಸ್ಥಾನದ ವತಿಯಿಂದ ಸೇವಾ ಪ್ರಸಾದ ನೀಡಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಹೇಮಂತ್ ಕುಮಾರ್ ರೈ ಮನವಳಿಕೆ ಮತ್ತು ದೇವಸ್ಥಾನದ ಸಿಬ್ಬಂದಿಗಳು, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here