ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆಯವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ನಿಧನರಾದ ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆಯವರಿಗೆ ಶ್ರದ್ಧಾಂಜಲಿ ಸಭೆಯು ಜೂ.18ರಂದು ಕೊಂಬೆಟ್ಟು ಸುಂದರರಾಮ್ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.


ನಾನು ಶಾಸಕನಾಗಿ ಇಲ್ಲಿ ಮಾತನಾಡಬೇಕಿದ್ದರೂ ರಮೇಶ್ ರೈಯವರೂ ಕಾರಣಿಭೂತರು-ಅಶೋಕ್ ಕುಮಾರ್ ರೈ:
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ತನ್ನ ಕೈಯಲ್ಲಿ ಏನೂ ಇಲ್ಲದಿದ್ದರೂ ಪುತ್ತೂರು-ಸುಳ್ಯ ಭಾಗದಲ್ಲಿ ಸಮಾಜದಲ್ಲಿ ಬಡವರ ಮೇಲಿನ ಕಾಳಜಿಯಿಂದ ಸೇವೆ ಮಾಡುತ್ತಿದ್ದ ರಮೇಶ್ ರೈಯವರ ಅಗಲುವಿಕೆಯು ಸಮಾಜಕ್ಕೆ ಬಹಳಷ್ಟು ನೋವುಂಟುಮಾಡಿದೆ. ಘಟನೆಗೆ ಕೆಲ ದಿನಗಳ ಹಿಂದೆ ನನಗೆ ಕರೆ ಮಾಡಿದ್ದರೂ ಯಾವುದೇ ವಿಚಾರವನ್ನು ಅವರು ಹೇಳಿಕೊಂಡಿಲ್ಲ. ನಾನು ಶಾಸಕನಾಗಿ ಇಲ್ಲಿ ಮಾತನಾಡಬೇಕಿದ್ದರೂ ರಮೇಶ್ ರೈಯವರೂ ಕಾರಣಿಭೂತರು. ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಹಗಲು-ರಾತ್ರಿ ಎನ್ನದೇ ಯಾವುದೇ ಸಮಯದಲ್ಲಿ ಅವರ ಮನೆಗೆ ತೆರಳಿ ಅವರ ಪರಿಹಾರ ನೀಡುತ್ತಿದ್ದ ರಮೇಶ್ ರೈಯವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದೆ. ಸಮಾಜದ ಕಷ್ಟಗಳಲ್ಲಿ ಭಾಗಿಯಾಗುತ್ತಿದ್ದ ರಮೇಶ್ ರೈಯವರ ಕುಟುಂಬದ ಕಷ್ಟ-ಸುಖಗಳಲ್ಲಿ ಜೊತೆಯಲ್ಲಿರುವುದಾಗಿ ತಿಳಿಸಿದರು.


ರಮೇಶ್ ರೈಯವರ ಪುತ್ರನಿಗೆ ಉದ್ಯೋಗ ಖಾಯಂಗೊಳಿಸುವ ಮೂಲಕ ಕುಟುಂಬಕ್ಕೆ ಆರ್ಥಿಕ ಶಕ್ತಿ ನೀಡಲಿದೆ- ಸಂಜೀವ ಮಠಂದೂರು:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಅಜಾತ ಶತ್ರುವಾಗಿ ಬೆಳೆದಿದ್ದ ರಮೇಶ್ ರೈಯವರು ನಗರ ಸಭೆಯ ಚುನಾವಣೆಯಲ್ಲಿ ನಮ್ಮ ಪಕ್ಷ ಸೋಲುವ ಕ್ಷೇತ್ರದಲ್ಲಿ ಅವರು ನಿಂತು ಗೆಲ್ಲುವ ಶಕ್ತಿಯಿದ್ದವರು. ಜನರ ಪ್ರೀತಿ, ವಿಶ್ವಾಸ ಗಳಿಸುವ ಮೂಲಕ ಉಪ ಚುನಾವಣೆಯ ತ್ರಿಕೋನ ಸ್ಪರ್ಧೆಯ ಗೆದ್ದವರು. ಜನಪ್ರತಿನಿಧಿ, ಸಮಾಜ ಸೇವಕನಾಗಿ ಸ್ವಂತಕ್ಕಾಗಿ ಏನೂ ಮಾಡಿಲ್ಲ. ಸಮಾಜದ ಸಮಷ್ಟಿಯನ್ನು ಕಂಡವರು. ಅವರ ಅಗಲುವಿಕೆಯು ಪಕ್ಷ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಸಮಾಜಿಕ, ಧಾರ್ಮಿಕ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದವರು. ಅವರು ಮಾಡಿರುವ ಕಲಸ ಕಾರ್ಯಗಳು ನಮ್ಮ ಮುಂದಿದೆ. ಅವರ ಪುತ್ರ ಟೌನ್‌ಬ್ಯಾಂಕ್‌ನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಆಡಳಿತ ಮಂಡಳಿಯು ಅವರನ್ನು ಖಾಯಂಗೊಳಿಸುವ ಮೂಲಕ ಕುಟುಂಬಕ್ಕೆ ಆರ್ಥಿಕ ಶಕ್ತಿ ನೀಡಲಿದೆ ಎಂದರು.


ಕುಟುಂಬಕ್ಕೆ ಮಾತ್ರವಲ್ಲ. ಸಮಾಜಕ್ಕೂ ತುಂಬಲಾರದ ನಷ್ಟ-ಹೇಮನಾಥ ಶೆಟ್ಟಿ ಕಾವು
ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಧರ್ಮ, ರಾಜಕೀಯ ರಹಿತವಾಗಿ ಸಮಾಜದಲ್ಲಿ ಬೆರೆಯುತ್ತಿದ್ದ ರಮೇಶ್ ರೈಯವರು ತನ್ನ ವಿಶಿಷ್ಠ ಗುಣಗಳಿಂದ ಸಮಾಜದಲ್ಲಿ ಎಲ್ಲರ ಪ್ರೀತಿ ಗಳಿಸಿದವರು. ಇತರಿಗೆ ಧೈರ್ಯ ತುಂಬಿ ಅವರ ಕಷ್ಠಗಳಲ್ಲಿ ಭಾಗಿಯಾಗುತ್ತಿದ್ದ ಅವರು ಭರವಸೆಯ ವ್ಯಕ್ತಿಯಾಗಿದ್ದರು. ನಗರ ಸಭೆಯ ಉಪ ಚುನಾವಣೆಗೆ ಅವರ ಹೆಸರು ಘೋಷಣೆಯಾದಾಗ ನಮಗೆ ಕೈ ಕಟ್ಟಿಹಾಕಿದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿರುವುದು ಅವರ ಕುಟುಂಬಕ್ಕೆ ಮಾತ್ರವಲ್ಲಿ ಸಮಾಜಕ್ಕೆ ನಷ್ಟವಾಗಿದೆ ಎಂದರು.


ಸಮರ್ಪಣಾ ಸೇವೆಗೆ ಇನ್ನೊಂದು ಹೆಸರೇ ರಮೇಶ್ ರೈಯವರು-ಅರುಣ್ ಕುಮಾರ್ ಪುತ್ತಿಲ:
ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ರಮೇಶ್ ರೈಯವರ ಬದುಕಿನಲ್ಲಿ ಹುಟ್ಟು ಹಾಗೂ ಸಾವು ಎರಡೂ ಆಕಸ್ಮಿಕವಾಗಿ ಬಂದಿದೆ. ಅವರ ನಿಧನದಿಂದಾಗಿ ಸಮಾಜದ ಒಬ್ಬ ಸಮರ್ಥ ನಾಯಕನನ್ನು ಕಳೆದುಕೊಂಡಿದ್ದೇವೆ. ಸಮರ್ಪಣಾ ಸೇವೆಗೆ ಅವರೇ ಸೂಕ್ತ. ಎಲ್ಲಾ ಕ್ಷೇತ್ರದಲ್ಲಿ ಅವರು ಮಾಡಿದೆ ಕೆಲಸ ಕಾರ್ಯಗಳು ಶಾಶ್ವತವಾಗಿ ಉಳಿಯಲಿದೆ. ಎಲ್ಲರನ್ನು ಸಮಚಿತ್ತದಿಂದ ಕಾಣುವ ಮೂಲಕ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದರು. ಧಾರ್ಮಿಕ ಕಾರ್ಯಗಳಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡಿದವರು ಎಂದರು.


ಶಿಸ್ತುಬದ್ಧವಾದ, ಪ್ರಾಮಾಣಿಕ ವ್ಯಕ್ತಿಯಾಗಿದ್ದರು-ಸೂತ್ರಬೆಟ್ಟು ಜಗನ್ನಾಥ ರೈ:
ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ, ರಮೇಶ್ ರೈಯವರ ಮೂಲಕ ನೆಲ್ಲಿಕಟ್ಟೆಯವರ ಪರಿಚಯವಾಗಿದೆ. ರಾಜಕೀಯವಾಗಿ ನಮ್ಮ ಪಕ್ಷ ಬೇರೆ ಬೇರೆಯಾಗಿದ್ದರೂ ನಮ್ಮಲ್ಲಿ ರಾಜಕೀಯ ಬಂದಿಲ್ಲ. ಎಲ್ಲಾ ಕಾರ್ಯಗಳಲ್ಲಿಯೂ ಶಿಸ್ತು ಬದ್ಧವಾಗಿ ನಿರ್ವಹಿಸುವ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದರು.


ಪಕ್ಷ, ಜಾತಿ, ಮತಗಳ ಎಲ್ಲೆ ಮೀರಿದ ವ್ಯಕ್ತಿಯಾಗಿದ್ದರು-ಡಾ.ಸುರೇಶ್ ಪುತ್ತೂರಾಯ:
ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಸಮಾಜದಲ್ಲಿ ಎಲ್ಲರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿರುವ ವ್ಯಕ್ತಿಯಾಗಿದ್ದ ರಮೇಶ್ ರೈಯವರು ಇಂತಹ ಸ್ಥಿತಿ ಬಂದಿರುವುದು ನಂಬಲಸಾಧ್ಯವಾದುದು. ಅವರ ಅಗಲುವಿಕೆಯು ಜೀರ್ಣಿಸಲು ಕಷ್ಟವಾದ ವಿಷಯ. ಸಂಪ್ಯದ ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುತ್ತಿದ್ದರು. ತಾನೊಬ್ಬ ನಾಯಕ ಎಂದು ಕರೆಸಿಕೊಳ್ಳುತ್ತಿರಲಿಲ್ಲ. ಅವರ ನಮಗೆ ಗೊತ್ತಿಲ್ಲದಂತೆ ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ರಮೇಶ್ ರೈಯವರು ಪಕ್ಷ, ಜಾತಿ, ಮತಗಳ ಎಲ್ಲೆ ಮೀರಿದ ವ್ಯಕ್ತಿಯಾಗಿದ್ದರು.


ಸಮಾಜ ಸೇವಕರಲ್ಲಿ ಅಪರೂಪದ ವ್ಯಕ್ತಿ ರಮೇಶ್ ರೈ-ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ:
ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ ರೈ ನೆಲ್ಲಿಕಟ್ಟೆ ಮಾತನಾಡಿ, ಬಹಳಷ್ಟು ಮಂದಿ ಸಮಾಜ ಸೇವಕರಿದ್ದು ಅಂತಹವರಲ್ಲಿಯೂ ರಮೇಶ್ ರೈಯವರು ಅಪರೂಪದ ವ್ಯಕ್ತಿ. ಅದೆಷ್ಟೋ ಅಸಹಾಯಕರಿಗೆ ಸಹಾಯ ಮಾಡುತ್ತಿದ್ದವರು ಯಾಕೆ ಇಂತಹ ನಿರ್ಧಾರ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಉತ್ತರ ಇಲ್ಲದಾಗಿದೆ. ಘಟನೆ ನಡೆದ ಸ್ಥಳದಲ್ಲಿ ನೂರಾರು ಮಂದಿ ಪುತ್ತೂರಿನವರು ಭಾಗವಹಿಸಿದ್ದ ಅವರ ವ್ಯಕ್ತಿತ್ವವನ್ನು ತಿಳಿಸುತ್ತದೆ. ಅವರ ಅಗಲುವಿಕೆಯಿಂದ ಅವರ ಸ್ಥಾನ ತುಂಬಿಸಲು ಸಾಧ್ಯ ಇಲ್ಲ. ಅವರ ಕುಟುಂಬಸ್ಥರ ಜೀವನಕ್ಕೆ ಸಹಕಾರ ಆಗುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯವಬೇಕಿದೆ ಎಂದರು.


ರಮೇಶ್ ರೈಯವರ ಮಕ್ಕಳಿಗೆ ಉದ್ಯೋಗ ಒದಗಿಸುವ ಅವರ ಋಣ ತೀರಿಸಬೇಕು-ಪೆರಾಜೆ ಸುಧಾಕರ ರೈ:
ಪೆರಾಜೆ ಸುಧಾಕರ ರೈ ಮಾತನಾಡಿ, ಸುಳ್ಯದಲ್ಲಿ ಹುಟ್ಟಿ ಬೆಳೆದು ಪುತ್ತೂರಿನಲ್ಲಿ ವ್ಯವಹಾರ ನಡೆಸಿದ ರಮೇಶ್ ರೈಯವರು ಜಾತಿ ಬೇಧವಿಲ್ಲದೆ ಸಮಾಜದ ಕೆಲಸ ಮಾಡಿದವರು. ರಮೇಶ್ ರೈಯವರಿಗೆ ರಮೇಶ್ ರೈಯವರೇ ಸಾಟಿ. ಸಂಕಷ್ಟದಲ್ಲಿರುವವರಿಗೆ ಮುಂದೆ ನಿಂತು ಸಹಾಯ ಮಾಡುವವರಾಗಿದ್ದರು. ಇಂತಹ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಇನ್ನು ಅವರ ಕೆಲಸ ಮುಗಿಯಿತು ಎಂಬ ಭಾವನೆ ಇಲ್ಲದೆ. ರಮೇಶ್ ರೈಯವರ ಮೇಲಿನ ಪ್ರೀತಿಯನ್ನು ಅವರ ಕುಟುಂಬಸ್ಥರಿಗೆ ತೋರಿಸಬೇಕು. ವಿದ್ಯಾವಂತರಾದ ಮಕ್ಕಳಿಗೆ ಉದ್ಯೋಗ ನೀಡಿ ಅವರ ಋಣ ತೀರಿಸುವಂತೆ ವಿನಂತಿಸಿದರು.


ಮಾಜಿ ಶಾಸಕರಾದ ಮಲ್ಲಿಕಾ ಪ್ರಸಾದ್, ಶಕುಂತಲಾ ಶೆಟ್ಟಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಆರ್.ಸಿ ನಾರಾಯಣ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಅಳ್ವ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸದಸ್ಯರಾದ ಸುಂದರ ಪೂಜಾರಿ ಬಡಾವು, ವಿದ್ಯಾ ಗೌರಿ, ಇಂದಿರಾ ಪುರುಷೋತ್ತಮ, ಯಶೋಧ ಬಿರಾವು, ಗೌರಿ ಬನ್ನೂರು, ಸಂತೋಷ್ ಬೊಳುವಾರು, ಪೌರಾಯುಕ್ತ ಮಧು ಎಸ್. ಮನೋಹರ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಉದ್ಯಮಿ ಶಿವರಾಮ ಆಳ್ವ, ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಬಿಜೆಪಿ ಗ್ರಾಮಾಂತ ಮಂಡಲದ ಮಾಜಿ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಸತೀಶ್ ನಾೖಕ್‌ ಪರ್ಲಡ್ಕ, ಬಿಜೆಪಿ ಆರ್ಯಾಪ ಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಬಿ.ಎಸ್., ಉದ್ಯಮಿ ಸುಧೀರ್ ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಪದ್ಮಶ್ರೀ ಸೋಲಾರ್ ಮ್ಹಾಲಕ ಸೀತಾರಾಮ ರೈ ಕೆದಂಬಾಡಿ ಗುತ್ತು, ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಮಿಶನ್ ಮೂಲೆ, ಆರ್ಯಾಪು ಗ್ರಾ.ಪಂ ಸದಸ್ಯರಾದ ನೇಮಾಕ್ಷ ಸುವರ್ಣ ಅಮ್ಮುಂಜ, ಹರೀಶ್ ನಾಯಕ್ ವಾಗ್ಲೆ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಸುಪ್ರೀತ್ ಜೈನ್ ಬೆಳಂದೂರುಗುತ್ತು, ರಾಜೇಶ್ ಮಂಗಳೂರು, ಹರೀಶ್ ಪ್ಲಂಬರ್ ಮೊಟ್ಟೆತ್ತಡ್ಕ, ಹೊಟೇಲ್ ರತ್ನಶ್ರೀ ಗ್ರೂಪ್‌ನ ಜಯಂತ್ ಶೆಟ್ಟಿ ಕಂಬಳತ್ತಡ್ಡ, ಸಂಪ್ಯ ಅಕ್ಷಯ ಜ್ಯುವೆಲ್ಲರಿ ವಕ್ಸ್೯ ನ ರವಿಚಂದ್ರ ಆಚಾರ್ಯ, ರವೀಂದ್ರ ಶೆಟ್ಟಿ ಕಂಬಳತ್ತಡ್ಡ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುರೇಶ್ ಪಿ, ಸಂಪ್ಯ ಆರ್ವಿ ಚಿಕನ್ ಸೆಂಟರ್‌ನ ರಾಘವೇಂದ್ರ ಶೆಟ್ಟಿ, ಲೋಕೇಶ್ ರೈ ಮೇರ್ಲ, ಪಡುಮಲೆ ಕೋಟಿ ಚೆನ್ನಯ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ, ಬನ್ನೂರು ಗ್ರಾ.ಪಂ ಸದಸ್ಯೆ ರಮಣಿ ಡಿ. ಗಾಣಿಗ, ಮೃತ ರಮೇಶ್ ರೈಯವರ ಪತ್ನಿ ಮೋಹಿನಿ ರೈ, ಪುತ್ರ ವಿನೀಶ್, ಪುತ್ರಿ ವೀಕ್ಷಾ, ಕುಟುಂಬಸ್ಥರು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here