ಪುತ್ತೂರು: ಸತ್ಯ ಸಾಯಿ ಬಾಬಾರವರ 100 ನೇ ಜನ್ಮ ದಿನದ ಸಲುವಾಗಿ 1 ಕೋಟಿ ಗಿಡ ನಡುವ ಕಾರ್ಯಕ್ರಮದ ಅಂಗವಾಗಿ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಹಣ್ಣಿನ ಗಿಡಗಳ ಹಸ್ತಾಂತರ ಕಾರ್ಯಕ್ರಮ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ವತಿಯಿಂದ ನಡೆಯಿತು.
ಸಂಸ್ಥೆಯ ಅಧಕ್ಷರಾದ ಜಯರಾಮ ಕೆದಿಲಾಯ ಶಿಬರ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಎಸ್ ಆರ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಪ್ರಿಯಾ ಎಮ್.ಪಿ ಪೈ, ಸೇವಾ ಸಂಯೋಜಕಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಮಹಿಳಾ ವಿಭಾಗ ಕರ್ನಾಟಕ ರಾಜ್ಯ ಉತ್ತರ, ಶ್ರೀ ಪ್ರಸನ್ನ ಎನ್ ಭಟ್ ಅಧ್ಯಕ್ಷರು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ದ. ಕ ಜಿಲ್ಲೆ, ಮೂಕಾಂಬಿಕಾ ಎನ್ ರೈ, ಶೈಕ್ಷಣಿಕ ಸಂಯೋಜಕಿ ಮಹಿಳಾ ವಿಭಾಗ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ದ. ಕ ಜಿಲ್ಲೆ, ಮುಕ್ತಾ ಕಿಣಿ ಆಧ್ಯಾತ್ಮಿಕ ಸಂಯೋಜಕಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ದ. ಕ ಜಿಲ್ಲೆ, ಶಾಂತಿ ಜೆ ಎನ್ ಭಟ್,ಸೇವಾ ಸಂಯೋಜಕಿ ಮಹಿಳಾ ವಿಭಾಗ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ದ. ಕ ಜಿಲ್ಲೆ, ವೀಣಾ ಕಾಂಜೋಡು,ಸೇವಾ ಸಂಯೋಜಕಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಯುವ ಮಹಿಳಾ, ತಾರಾ ಕಾಮತ್,ಮಹಿಳಾ ಸಂಯೋಜಕಿ ಶ್ರೀ ಸತ್ಯಸಾಯಿ ಸೇವಾ ಸಮಿತಿ ಮಂಗಳೂರು, ನಾರಾಯಣ ರಾವ್, ಶೈಕ್ಷಣಿಕ ಸಂಯೋಜಕ ಶ್ರೀ ಸತ್ಯಸಾಯಿ ಸೇವಾ ಸಮಿತಿ ಬಂಟ್ವಾಳ, ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ ಯ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್, ಮುಖ್ಯೋಪಾಧ್ಯಾಯರಾದ ಪ್ರಸನ್ನ ಕೆ, ಪುತ್ತೂರು ಸತ್ಯಸಾಯಿ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಯವರು ಮಾತನಾಡಿ ಕಾಡು ನಾಶದ ಪರಿಣಾಮವನ್ನು ವಿವರಿಸಿದರು. ಹೆಚ್ಚಾಗಿ ಆಮ್ಲಜನಕ ಬಿಡುಗಡೆ ಮಾಡುವ ಮರಗಳನ್ನು ನೆಡುವುದರ ಬಗ್ಗೆ ಗಮನ ನೀಡಬೇಕು ಎಂದು ಹೇಳಿದರು. ನಂತರ ಪ್ರಿಯಾ ಎಮ್ ಪಿ ಪೈ ರವರು ಮಾತನಾಡಿ ಶ್ರೀ ಸತ್ಯಸಾಯಿ ಬಾಬಾ ರ 100ನೇ ಹುಟ್ಟುಹಬ್ಬದ ಪ್ರಯುಕ್ತ ಸತ್ಯ ಸಾಯಿ ಸಂಘದಿಂದ ಕರ್ನಾಟಕದಲ್ಲಿ ಸುಮಾರು 50,000 ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಜಯರಾಮ ಕೆದಿಲಾಯರು ಮಾತನಾಡಿ ಸಂಸ್ಥೆಯಿಂದ ನೀಡಿದ ಗಿಡಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತೇವೆ ಎಂದು ಮಕ್ಕಳ ಪರವಾಗಿ ಆಶ್ವಾಸನೆ ನೀಡಿದರು. ಸಂಸ್ಥೆಯಲ್ಲಿ ಸ್ವಚ್ಛತಾ ಕಾರ್ಯ, ಅಡುಗೆ ಕಾರ್ಯ ಹಾಗೂ ಕಚೇರಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಸೇರಿ 7ಜನರಿಗೆ ಸಮಿತಿ ವತಿಯಿಂದ ಸೀರೆಗಳನ್ನು ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು. ರವಿಶಂಕರ್ ಧನ್ಯವಾದ ಸಲ್ಲಿಸಿದರು .