ಪುತ್ತೂರನ್ನು ಭಾರತದ ರನ್ನಿಂಗ್ ಮ್ಯಾಪ್ನಲ್ಲಿ ಹಾಕುವ ಗುರಿ – ಡಾ.ದೀಪಕ್ ರೈ
ಪುತ್ತೂರು: ದಿ ಪುತ್ತೂರು ಕ್ಲಬ್ ವತಿಯಿಂದ ಬಾಕ್ಕಾರ್ಡ್ ಮತ್ತು ಬಿಂದು ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಪುತ್ತೂರು ಮನ್ಸೂನ್ ರನ್ -2025 ’ಬಲೆ ಬಲಿಪುಗ’ ಮಿನಿ ಮ್ಯಾರಥಾನ್ ಜು.6ಕ್ಕೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯಲಿದೆ ಎಂದು ದಿ ಪುತ್ತೂರು ಕ್ಲಬ್ ಅಧ್ಯಕ್ಷ ಡಾ. ದೀಪಕ್ ರೈ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಬಲೆ ಬಲಿಪುಗ ಮ್ಯಾರಥಾನ್ 10 ಕಿ.ಮೀ ಗೆ ಸೀಮಿತವಾಗಿ ಆಯೋಜಿಸಿದ್ದೆವು. ಬಳಿಕ ಕೋವಿಡ್ ಸಮಯದಲ್ಲಿ ಮಾಡಲು ಆಗಿಲ್ಲ. ಈ ಭಾರಿ 21 ಕಿ.ಮೀ ನ ಮಿನಿ ಮ್ಯಾರಥಾನ್ ಆಯೋಜಿಸಿದ್ದೇವೆ. ಪುತ್ತೂರನ್ನು ಭಾರತದ ರನ್ನಿಂಗ್ ಮ್ಯಾಪ್ನಲ್ಲಿ ಹಾಕುವ ಗುರಿಯನ್ನು ಇಟ್ಟುಕೊಂಡು ಮ್ಯಾರಥಾನ್ ಆಯೋಜಿಸಲಾಗಿದ್ದು, ನಾಲ್ಕು ವಿಭಾಗದಲ್ಲಿ ಮ್ಯಾರಥಾನ್ ನಡೆಯಲಿದೆ. 18 ವರ್ಷ ಮೇಲ್ಪಟ್ಟವರಿಗೆ 21 ಕಿ.ಮೀ, 15 ವರ್ಷ ಮೇಲ್ಪಟ್ಟವರಿಗೆ 10 ಕಿ.ಮೀ, 5 ಕಿ.ಮೀ ಮತ್ತು 3 ಕಿ.ಮೀ ಓಡಬಹುದು. ಭಾರತಾದ್ಯಂತ ಕ್ರೀಡಾಪಟುಗಳು, ಆಸಕ್ತರು ಮ್ಯಾರಥಾನ್ನಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಆನ್ಲೈನ್ ನೋಂದಾವಣೆ ಆರಂಭಗೊಂಡಿದೆ ಎಂದವರು ಹೇಳಿದರು.

ಸಮಯ ನಿಗದಿಗೆ ತಾಂತ್ರಿಕತೆ ಅಳವಡಿಕೆ:
ಮ್ಯಾರಥಾನ್ನಲ್ಲಿ ಭಾಗವಹಿಸಿದವರು ಓಡುವ ವೇಗ ಮತ್ತು ಸಮಯ ನಿಗದಿಗೆ ಹಾಗೂ ಅವರನ್ನು ಮಾನಿಟರ್ ಮಾಡಲು ತಾಂತ್ರಿಕತೆ ಅಳವಡಿಸಲಾಗಿದ್ದು, ಅಂತರಾಷ್ಟ್ರೀಯ ಮಾದರಿಯಲ್ಲೇ ವ್ಯವಸ್ಥೆ ಕಲ್ಪಿಸಲಾಗಿದೆ. ಮ್ಯಾರಥಾನ್ಗೆ ಎಲೆಕ್ಟ್ರೋನಿಕ್ ಟೈಮಿಂಗ್ಸ್ ಅಳವಡಿಸಲಾಗಿದೆ. ಪ್ರತಿ ಕ್ರೀಡಾಪಟುಗಳ ಶರ್ಟ್ ಟ್ಯಾಗ್ನಲ್ಲಿ ಎಲೆಕ್ಟ್ರೋ ಚಿಪ್ ಅಳವಡಿಸಲಾಗುತ್ತದೆ. ಅದು ಅವರು ಓಡುವ ಸ್ಥಳವನ್ನು ಗುರುತಿಸುತ್ತದೆ. ಇದರಲ್ಲಿ ತಾಂತ್ರಿಕ ದೋಷ ಬಂದರೆ ನಮ್ಮ ಕಡೆಯಿಂದ ದೈಹಿಕ ಶಿಕ್ಷಣ ಶಿಕ್ಷಕ ಎಲಿಯಾಸ್ ಪಿಂಟೋ ಅವರ ನೇತೃತ್ವದಲ್ಲಿ ತೀರ್ಪುಗಾರರು ಅಲ್ಲಲ್ಲಿ ನೋಡಲಿದ್ದಾರೆ. ಸುಮಾರು 125 ಮಂದಿ ಸ್ವಯಂ ಸೇವಕರಿದ್ದಾರೆ. ಸ್ಪರ್ಧಿಗಳ ಆರೈಕೆಗಾಗಿ ಆಂಬುಲೆನ್ಸ್, ಫಿಸಿಯೋಥೆರಪಿ, ವೈದ್ಯರು ಜೊತೆಯಲ್ಲೇ ಇರಲಿದ್ದಾರೆ ಎಂದು ಡಾ. ದೀಪಕ್ ರೈ ತಿಳಿಸಿದರು.
ಪುತ್ತೂರು ಕ್ಲಬ್ನಿಂದ ಆರಂಭ ಸೇಡಿಯಾಪಿನಿಂದ ರಿಟರ್ನ್:
ಜು.6ಕ್ಕೆ ಬೆಳಗ್ಗೆ ಗಂಟೆ 6ಕ್ಕೆ ದಿ ಪುತ್ತೂರು ಕ್ಲಬ್ನಿಂದ ಮ್ಯಾರಥಾನ್ ಆರಂಭಗೊಳ್ಳಲಿದೆ. ಆರಂಭದಲ್ಲಿ 21 ಕಿ.ಮೀ ನ ಸ್ಪರ್ಧಿಗಳನ್ನು ಬಿಟ್ಟ ಬಳಿಕ 15 ನಿಮಿಷಗಳ ಅಂತರದಲ್ಲಿ ಇತರ ವಿಭಾಗದ ಸ್ಪರ್ಧಿಗಳನ್ನು ಬಿಡಲಾಗುವುದು. ಪುತ್ತೂರು ಕ್ಲಬ್ನಿಂದ ಆರಂಭಗೊಂಡು, ರೈಲ್ವೇ ಬೈಪಾಸ್ ರಸ್ತೆಯಾಗಿ ದರ್ಬೆ, ಬೊಳುವಾರು ಮುಖ್ಯರಸ್ತೆಯಾಗಿ, ಉಪ್ಪಿನಂಗಡಿ ರಸ್ತೆ, ಸೇಡಿಯಾಪು ತನಕ ಹೋಗಿ ಅಲ್ಲಿಂದ ಹಿಂದಕ್ಕೆ ಬಂದ ರಸ್ತೆಯಲ್ಲೇ ಬರಬೇಕು ಎಂದು ಡಾ. ದೀಪಕ್ ರೈ ಹೇಳಿದರು.
ಆನ್ಲೈನ್ನಲ್ಲೇ ಪ್ರಮಾಣ ಪತ್ರ ಸ್ವೀಕಾರ:
ವೆಬ್ ಪಿಪಲ್ನ ಶರತ್ ಅವರು ಮಾತನಾಡಿ ಭಾಗವಹಿಸುವ ಸ್ಪರ್ಧಿಗಳು ಆನ್ಲೈನ್ನಲ್ಲೇ ನೋಂದಾವಣೆ ಆಗಬೇಕು. ದಿ ಪುತ್ತೂರು ಕ್ಲಬ್ ವೆಬ್ಸೈಟ್ನಲ್ಲಿ ʼಬಲೆ ಬಲಿಪುಗ ಮ್ಯಾರಥಾನ್ʼ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ. ವಾರದೊಳಗೆ ಸುಮಾರು 200 ಮಂದಿ ಈಗಾಲೇ ನೋಂದಾವಣೆ ಮಾಡಿಕೊಂಡಿದ್ದಾರೆ ಎಂದವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದಿ ಪುತ್ತೂರು ಕ್ಲಬ್ನ ಉಪಾಧ್ಯಕ್ಷ ದೀಪಕ್ ಕೆ.ಪಿ, ದೈಹಿಕ ಶಿಕ್ಷಣ ಶಿಕ್ಷಕ ಎಲಿಯಾಸ್ ಪಿಂಟೋ, ಬಿಂದು ಕಂಪೆನಿಯ ಮಾರ್ಕೆಟಿಂಗ್ ಮುಖ್ಯಸ್ಥ ಹರಿಪ್ರಸಾದ್ ಉಪಸ್ಥಿತರಿದ್ದರು.
ಜೂ.22ಕ್ಕೆ ಫ್ರಿ ರನ್ – ಅರಿವು ಮೂಡಿಸುವ ಮ್ಯಾರಥಾನ್
ಜು.6ಕ್ಕೆ ನಡೆಯಲಿರುವ ಬಲೆಬಲಪುಗ ಮ್ಯಾರಥಾನ್ನ ಪ್ರಚಾರರ್ಥವಾಗಿ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜೂ.22ರಂದು ಬೆಳಗ್ಗೆ ಪುತೂರು ಕಿಲ್ಲೆ ಮೈದಾನದಿಂದ ದರ್ಬೆ ಸಂತಫಿಲೋಮಿನಾ ಕಾಲೇಜು ಮೈದಾನದ ತನಕ ಅರಿವು ಮೂಡಿಸುವ ಮ್ಯಾರಥಾನ್ ನಡೆಯಲಿದೆ. ಈ ಸಂದರ್ಭ ಅನೇಕ ಸೆಲೆಬ್ರೆಟಿಗಳು ಭಾಗವಹಿಸಲಿದ್ದಾರೆ ಎಂದು ಡಾ. ದೀಪಕ್ ರೈ ತಿಳಿಸಿದ್ದಾರೆ.