ಸಜಂಕಾಡಿ ಶಾಲಾ ಮಂತ್ರಿಮಂಡಲ ರಚನೆ- ಮುಖ್ಯಮಂತ್ರಿಯಾಗಿ ಆಯಿಷತ್ ಶಿಮ ಉಪಮುಖ್ಯಮಂತ್ರಿಯಾಗಿ ವಂಶಿಕ ಆಯ್ಕೆ-ಮೊಬೈಲ್ ಇ.ವಿ.ಎಂ ಮೂಲಕ‌ ಮತದಾನ ಪ್ರಕ್ರಿಯೆ

0

ಪುತ್ತೂರು: ದ.ಕ.ಜಿ.ಪಂ.ಹಿ ಪ್ರಾ ಶಾಲೆ ಸಜಂಕಾಡಿಯಲ್ಲಿ 2025-26ನೇ ಸಾಲಿನ ಮಂತ್ರಿಮಂಡಲ ರಚನೆ ನಡೆಯಿತು.

ಮುಖ್ಯಮಂತ್ರಿ ಯಾಗಿ ಆಯಿಷತ್ ಶಿಮ (7ನೇ) ,ಉಪಮುಖ್ಯಮಂತ್ರಿಯಾಗಿ ವಂಶಿಕ (6ನೇ) ,ಶಿಕ್ಷಣ ಮಂತ್ರಿಯಾಗಿ ಮುಹಮ್ಮದ್ ತಮೀಮ್ (7ನೇ ) ,ಉಪಶಿಕ್ಷಣ ಮಂತ್ರಿ ಫಾತಿಮತ್ ಪಾಝಿಲ(6ನೇ)ಸ್ವಚ್ಛತಾ ಮತ್ತು ಆಹಾರ ಮಂತ್ರಿ ಮುಹಮ್ಮದ್ ಆಸೀಪ್ (6ನೇ), ಉಪ ಸ್ವಚ್ಛತಾ ಮತ್ತು ಆಹಾರ ಮಂತ್ರಿ ನಿಶಿಕಾ(6ನೇ ) ಕ್ರೀಡಾಮಂತ್ರಿ ಜೈಪ್ರೀತ್ (7ನೇ ) ,ಮಹಮ್ಮದ್ ಅಜ್ಮಲ್ (6ನೇ),ರಕ್ಷಣಾ ಮಂತ್ರಿ ಜೈಪ್ರೀತ್ (6ನೇ ) ಉಪರಕ್ಷಣಾ ಮಂತ್ರಿ ಅಬೂಬಕರ್ ಉಝೈರ್ (6ನೇ ),ಅಬ್ದುಲ್ ಘನಿ‌ ಅಹಮ್ಮದ್ ಆಕಿಫ್ (6ನೇ) ನೀರಾವರಿ ಮಂತ್ರಿ ವಿಶ್ಮಯ್ (7ನೇ),ಉಪ ನೀರಾವರಿ ಮಂತ್ರಿ ಧನ್ವಿತ್ (6ನೇ) ವಾರ್ತಾಮಂತ್ರಿ ಅಲೀಮತ್ ಸಹದಿಯ (5ನೇ) ,ಉಪ ವಾರ್ತಾ ಮಂತ್ರಿ ಫಾತಿಮತ್ ಅಫೀಫ(6ನೇ) ತೋಟಗಾರಿಕಾ ಮಂತ್ರಿ ಮನುಪ್ರೀತ್ (5ನೇ)ಉಪತೋಟಗಾರಿಕಾ ಮಂತ್ರಿ ಹಿಮಾನಿ (6ನೇ),ಸಾಂಸ್ಕೃತಿಕ ಮಂತ್ರಿಯಾಗಿ ಫಾತಿಮಾ (7ನೇ) ,ಉಪಸಾಂಸ್ಕ್ರತಿಕ ಮಂತ್ರಿಯಾಗಿ ಆಯಿಷತ್ ಪಾಹಿಲ (6ನೇ) ವಿರೋಧ ಪಕ್ಷದ ನಾಯಕನಾಗಿ ಮಹಮ್ಮದ್ ಮಿರ್ಷಾದ್(7ನೇ) , ಉಪ ವಿರೋಧ ಪಕ್ಷದ ನಾಯಕಿಯಾಗಿ ಫಾತಿಮ(7ನೇ ) ಆಯ್ಕೆಯಾಗಿದ್ದಾರೆ .ಇದಲ್ಲದೆ ಆರೋಗ್ಯ ನೈರ್ಮಲ್ಯ ಸಂಘ ,ಮಕ್ಕಳ ಹಕ್ಕುಗಳನ್ನು ಸಂಘ, ಕಲಾಸಂಘ, ಕ್ರೀಡಾ ಸಂಘ, ಭಾಷಾ ಸಂಘ ,ಇಕೋ ಕ್ಲಬ್ ಗಳ ಅಧ್ಯಕ್ಷ ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಆಧುನಿಕ‌ ತಂತ್ರಜ್ಞಾನವನ್ನು ಬಳಸಿಕೊಂಡು ಮೊಬೈಲ್ ಇ.ವಿ.ಎಂ ಮೂಲಕ ಮತದಾನ ಪ್ರಕ್ರಿಯೆ ನಡೆಯಿತು .ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು‌ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು . ಈ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನ ಜಾಗೃತಿ ಮತ್ತು ಮತದಾನ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಲಾಯಿತು .ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ, ಅತಿಥಿ ಶಿಕ್ಷಕಿ ಅಯಿಷತ್ ಮಿಸ್ರಿಯ ಪಿ.ಎನ್, ಶಿಕ್ಷಕ ಗಣೇಶ ನಾಯಕ್ ಪುತ್ತೂರು ಚುನಾವಣಾಧಿಕಾರಿಗಳಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here