ಈಶ್ವರಮಂಗಲ : ಪಾಳ್ಯತ್ತಡ್ಕ ಶ್ರೀ ಗಜಾನನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ನಿರ್ದೇಶಕ ಶಿವರಾಮ ಶರ್ಮ. ಪಿ ವಹಿಸಿಕೊಂಡರು .ಮುಖ್ಯ ಅತಿಥಿ ಆನಂದ ರೈ ಎಸ್ ಯೋಗದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು .ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ನಡೆಸಿದ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು.
ಯೋಗದ ಪ್ರತಿಜ್ಞೆಯನ್ನು ಮುಖ್ಯಗುರು ಎನ್ .ನರೇಂದ್ರ ಭಟ್ ಅವರು ಮಂಡಿಸಿದರು . ವಿದ್ಯಾರ್ಥಿಗಳಿಂದ ಯೋಗಾಭ್ಯಾಸ ಮಾಡಿಸಲಾಯಿತು.
ಮುಖ್ಯಗುರು ಎನ್.ನರೇಂದ್ರ ಭಟ್ ಸ್ವಾಗತಿಸಿದರು.ವಿದ್ಯಾಲಕ್ಷ್ಮಿ ವಂದಿಸಿದರು .ಪ್ರೇಮ ಕಾರ್ಯಕ್ರಮವನ್ನು ನಿರೂಪಿಸಿದರು.