ಉಪ್ಪಿನಂಗಡಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ 11ನೇ ವರ್ಷದ ಯೋಗ ವಾರ್ಷಿಕ ಹಬ್ಬ

0

ಉಪ್ಪಿನಂಗಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿಜಿಸ್ಟರ್ಡ್ ಕರ್ನಾಟಕ, ಮಂಗಳೂರು ಮಹಾನಗರ, ಉಪ್ಪಿನಂಗಡಿ ನಗರ, ಸಹಸ್ರಲಿಂಗೇಶ್ವರ ಶಾಖೆ, ನೇತ್ರಾವತಿ ಭವನ ಉಪ್ಪಿನಂಗಡಿ ಇಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ 11ನೇ ವರ್ಷದ ಯೋಗ ವಾರ್ಷಿಕ ಹಬ್ಬ ಆಚರಿಸಲಾಯಿತು.

ಕಾರ್ಯಕ್ರಮವು ಬೆಳಗ್ಗೆ ಸಮಯ 4:55 ಕ್ಕೆ ಮೋಹಿನಿ ಅವರ ಭಜನೆಯೊಂದಿಗೆ ಆರಂಭವಾಯಿತು. ಅಮೃತವಚನವನ್ನು ಹೇಮಲತಾ ವಾಚಿಸಿದರು. ಪಂಚಾಂಗವನ್ನು ಯಶನ್ ಪಠಿಸಿದರು. ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ, ಗಣಪತಿ ನಮಸ್ಕಾರ ರವರಗೆ ವಿವರಣೆಯನ್ನು ಗಾಣಿಗ ಸಮುದಾಯ ಭವನ ಶಾಖೆಯ ಶಿಕ್ಷಕರಾದ ಯಶೋದರ ನಡೆಸಿಕೊಟ್ಟರು. ಪ್ರಾತ್ಯಕ್ಷಿಕೆಯಲ್ಲಿ ಶ್ವೇತಾ,ಆಶಾ, ರಾಜೇಶ್ ಮತ್ತು ಶೇಖರ್ ಸಹಕರಿಸಿದರು.

11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಆರ್ತಿಲ ಕೃಷ್ಣರಾವ್, ಪತ್ರಕರ್ತರಾದ ಉದಯ್ ಕುಮಾರ್ ಯು.ಎಲ್., ಎಸ್ ಪಿ ವೈ ಎಸ್ ಎಸ್ ಉಪ್ಪಿನಂಗಡಿ ನಗರ ಸಂಚಾಲಕರಾದ ಸಂತೋಷ್ ಕುಮಾರ್, ರಾಜೇಂದ್ರ, ಶಶಿ ನಡೆಸಿಕೊಟ್ಟರು. ಯೋಗ ಹಾಗೂ ಯೋಗ ದಿನಾಚರಣೆಯ ಮಹತ್ವ ಹಾಗೂ ವಿಶೇಷತೆಯನ್ನು ಉಪ್ಪಿನಂಗಡಿ ಶಾಖೆಯ ಡಾಕ್ಟರ್ ಶೃತಿ, ಪಾರ್ವತಿ ಬೌದ್ಧಿಕೊಂದಿಗೆ ನಡೆಸಿಕೊಟ್ಟರು. ಆಯುಷ್ ಇಲಾಖೆಯ ಪಠ್ಯಕ್ರಮದಂತೆ ವಿವಿಧ ಆಸನಗಳನ್ನು ಒಳಗೊಂಡ ಆಸನಭ್ಯಾಸವನ್ನು ಯೋಗ ಬಂಧು ಆಶಾ ಭಟ್ ವಿವರಣೆಯೊಂದಿಗೆ ನಡೆಸಿಕೊಟ್ಟರು.

ಪ್ರಾತ್ಯಕ್ಷಿಕೆಯಲ್ಲಿ ಸಂಜೀವ,ಪ್ರದೀಪ, ಶಶಿ,ಪೂರ್ವಿ ಸಹಕರಿಸಿದರು. ಅಮೃತಾಸನ ಮತ್ತು ಪ್ರಾಣಾಯಾಮ ವನ್ನು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಶಾಖೆಯ ಯೋಗ ಶಿಕ್ಷಕರಾದ ಗೋವಿಂದ ಪ್ರಸಾದ್ ಕಜೆ ನಡೆಸಿಕೊಟ್ಟರು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಶಾಖೆಯ ಯೋಗ ಬಂಧು ವಿಜೇತ ವಂದನಾರ್ಪಣೆಗೈದರು. ಲೋಕಕಲ್ಯಾಣ ಮಂತ್ರದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

LEAVE A REPLY

Please enter your comment!
Please enter your name here