ರೈತರ ಸರ್ವೇ ನಂಬರ್‌ನಲ್ಲಿ ಕೃಷಿಯೇತರ ಎಂದಿದ್ದಲ್ಲಿ ತಿದ್ದುಪಡಿಗೆ ಸೂಚನೆ

0

ಪುತ್ತೂರು: ಬೆಳೆ ವಿಮೆ, ಕೃಷಿ ಸಹಾಯಧನ ಸೇರಿದಂತೆ ವಿವಿಧ ಸವಲತ್ತುಗಳನ್ನು ಪಡೆಯಲು ಬೆಳೆ ಸಮೀಕ್ಷೆ ಅಗತ್ಯವಿದ್ದು, ರೈತರ ಸರ್ವೇ ನಂಬರ್‌ನಲ್ಲಿ ಕೃಷಿಯೇತರ (ಎನ್) ಎಂಬುದಾಗಿ ನಮೂದಾಗಿದ್ದಲ್ಲಿ ತಕ್ಷಣ ರೈತರು ತಮ್ಮ ವ್ಯಾಪ್ತಿಯ ಗ್ರಾಮ ಸಹಾಯಕ (ವಿಎ)ರನ್ನು ಸಂಪರ್ಕಿಸಿ ಕೃಷಿ ಭೂಮಿ ಎಂದು ತಿದ್ದುಪಡಿ ಮಾಡಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಜಮೀನು ಎಂದು ನಮೂದಾಗಿದ್ದರೆ ಮಾತ್ರ ಬೆಳೆ ಸಮೀಕ್ಷೆ ನಡೆಸಲಾಗುತ್ತದೆ. ತಿದ್ದುಪಡಿ ಮಾಡದೇ ಇದ್ದಲ್ಲಿ ಹೊಸ ಮುಂಗಾರಿಗೆ ಕೃಷಿಯೇತರ ಎಂದು ಬರುವುದರಿಂದ ಸಮೀಕ್ಷೆ ಕೈಗೊಳ್ಳಲಾಗದು. ಆರ್‌ಟಿಸಿಯಲ್ಲಿ ಕೃಷಿಯೇತರ ಎಂದು ನಮೂದಾದರೆ ಬೆಳೆ ವಿಮೆ ಪಡೆಯಲು ಅವಕಾಶವಿಲ್ಲ ಕೃಷಿ ಸಹಾಯಧನ ಪಡೆಯಲು ಸಮಸ್ಯೆಯಾಗುತ್ತದೆ. ಹಾಗಾಗಿ ಬೆಳೆ ದರ್ಶಕ ಆಪ್‌ನಲ್ಲಿ ತಮ್ಮ ಜಮೀನು ಸರ್ವೇ ನಂಬರ್‌ನಲ್ಲಿ ಎನ್‌ಎ ಎಂಬುದಾಗಿ ಇದೆಯೇ ಎಂಬುದನ್ನು ಗಮನಿಸಿ, ಒಂದು ವೇಳೆ ಹಾಗೆ ಇದ್ದರೆ ಅದನ್ನು ಸರಿಪಡಿಸಿ ಕೃಷಿ ಭೂಮಿ ಎಂದು ನಮೂದಿಸುವಂತೆ ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here