ಪುತ್ತೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ ಹಾಗೂ ಭ್ರಷ್ಟಾ ದುರಾಡಳಿತದ ವಿರುದ್ಧ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಜೂ.23ರಂದು ನರಿಮೊಗರು ಗ್ರಾ.ಪಂ.ಮುಂಭಾಗ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ದೀವಾಲಿಯಾಗಿದೆ. ಕಾಂಗ್ರೆಸ್ನವರಿಗೆ ಅಭಿವೃದ್ಧಿ ಬೇಡ. ಕೇವಲ ಲೂಟಿ ಹೊಡೆಯುವ ಕೆಲಸವಾಗುತ್ತಿದ್ದು ಯಾವುದೇ ಅನುದಾನಗಳು ಬರುತ್ತಿಲ್ಲ ಎಂದು ಆರೋಪಿಸಿದರು.
ನರಿಮೊಗರು ಗ್ರಾ.ಪಂ ಸದಸ್ಯ ನವೀನ್ ರೈ ಶಿಬರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನರಿಮೊಗರು ಗ್ರಾ.ಪಂ ಅಧ್ಯಕ್ಷೆ ಹರಿಣಿ ನಿತ್ಯಾನಂದ, ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ಸದಸ್ಯರಾದ ಕೇಶವ ಪೂಜಾರಿ ಮುಕ್ವೆ, ಸುಧಾಕರ ಕುಲಾಲ್, ಮಲ್ಲಕಾ ಲತಾ ರೈ, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್, ನಿರ್ದೇಶಕರಾದ ಜಯರಾಮ ಪೂಜಾರಿ, ಶಿವಪ್ರಸಾದ್, ವಿಶ್ವನಾಥ ಬಲ್ಯಾಯ, ಶರತ್ಚಂದ್ರ ಬೈಪಾಡಿತ್ತಾಯ, ಪ್ರವೀಣ್ ಸೇರಾಜೆ, ನವೀನ್ ರೈ ಪಂಜಳ, ಮೋನಪ್ಪ ಪುರುಷ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.