ಅರಿಯಡ್ಕ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

0

ಅರಿಯಡ್ಕ: ರಾಜ್ಯ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಅರಿಯಡ್ಕ ಮತ್ತು ಮಾಡ್ನೂರು ಶಕ್ತಿ ಕೇಂದ್ರದ ಆಶ್ರಯದಲ್ಲಿ ಜೂ.23ರಂದು ಅರಿಯಡ್ಕ ಗ್ರಾಮ ಪಂಚಾಯತ್ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.



ನೆಟ್ಟಣಿಗೆ ಮೂಡ್ನೂರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದೆ. ಜನ ಸಾಮಾನ್ಯರ ಭಾವನೆಗಳಿಗೆ ಬೆಲೆ ಇಲ್ಲ. ದಿನಕ್ಕೊಂದು ಭ್ರಷ್ಟಾಚಾರ ನಡೆಸುತ್ತಿದೆ. ಅಭಿವೃದ್ಧಿ ಕಾರ್ಯ ಶೂನ್ಯ. ಕಟ್ಟಡ ಕಟ್ಟುವ ಸಲುವಾಗಿ ಜನಸಾಮಾನ್ಯರಿಗೆ ಹೊಯಿಗೆ, ಕೆಂಪು ಕಲ್ಲು ಸಿಗುತ್ತಿಲ್ಲ. ಬಡಜನರಿಗೆ ವಸತಿ ಯೋಜನೆಯಡಿ ಮನೆಗಳು ಬರುತ್ತಿಲ್ಲ. ಗ್ಯಾರಂಟಿ ಭಾಗ್ಯಗಳಿಗೆ ಗ್ಯಾರೆಂಟಿಯೇ ಇಲ್ಲವಾಗಿದೆ ಎಂದು ಆರೋಪಿಸಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಗ್ರಾಮ ಪಂಚಾಯತಿಗಳಿಗೆ ಕೇಂದ್ರ ಸರ್ಕಾರದ 15ನೇ‌ ಹಣಕಾಸು ಯೋಜನೆಯಲ್ಲಿ ಅನುದಾನ ಬಿಡುಗಡೆ ಆಗುವುದನ್ನು ಬಿಟ್ಟರೆ, ರಾಜ್ಯ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಜನಸಾಮಾನ್ಯರು ತಮ್ಮ ಕೆಲಸಗಳಿಗೆ ಕಚೇರಿಯಿಂದ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಅರಿಯಡ್ಕ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯವರಿಗೆ ಬೇರೆ ಬೇರೆ ಕಡೆಗಳಲ್ಲಿ ಚಾರ್ಜ್ ಇರುವ ಕಾರಣ ನಮ್ಮ ಗ್ರಾಮದ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಬೀದಿಗಿಳಿದು ಹೋರಾಟ ಅನಿವಾರ್ಯವಾಗಿದೆ ಎಂದರು.


ಪ್ರತಿಭಟನೆಯಲ್ಲಿ ತಾಲೂಕು ಎಸ್ಸಿ ಮೋರ್ಛಾ ಅಧ್ಯಕ್ಷ ಲೋಹಿತ್ ಅಮ್ಚಿನಡ್ಕ, ಪುತ್ತೂರು ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಸೌಮ್ಯ ಬಾಲಸುಬ್ರಮಣ್ಯ, ತಾಲೂಕು ಮಹಿಳಾ ಮೋರ್ಛಾದ ಕಾರ್ಯದರ್ಶಿ ಚಿತ್ರಾ ಪ್ರಸಾದ್ ರೈ, ಉಪಾಧ್ಯಕ್ಷೆ ಭಾರತಿ ವಸಂತ್ ಕೌಡಿಚ್ಚಾರು, ಮಾಡ್ನೂರ್ ಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಆಚಾರ್ಯ ಮಳಿ, ಬೂತ್ ಅಧ್ಯಕ್ಷ ಪ್ರಸಾದ್ ಮಜ್ಜಾರಡ್ಕ, ವಿಶ್ವನಾಥ ಗೌಡ ಕನ್ನಯ, ರಮೇಶ್ ನಿಧಿಮುಂಡ, ಪ್ರವೀಣ್ ರೈ ಪಣೆಕ್ಕಳ, ನವೀನ್ ಪಟ್ಟಾಜೆ, ಕುಶಾಲಪ್ಪ ಬದಿಯಡ್ಕ, ಪ್ರಜ್ವಲ್ ಕೆರೆ ಮಾರು, ಪ್ರಸಾದ್ ರೈ ಅಂಕೊತ್ತಿಮಾರು ಪಂಚಾಯತ್ ಸದಸ್ಯರಾದ ಹರೀಶ್ ರೈ ಜಾರತ್ತಾರು, ರಾಜೇಶ್ ಮಣಿಯಾಣಿ ತ್ಯಾಗರಾಜೆ, ನಾರಾಯಣ ನಾಯ್ಕ ಚಾಕೋಟೆ, ರೇಣುಕಾ ಸತೀಶ್ ಕರ್ಕೇರಾ, ಉಷಾರೇಖಾ ರೈ ಕೊಳ್ಳಾಜೆ, ಪುಷ್ಪಲತಾ ಮರತ್ತಮೂಲೆ, ಸಾವಿತ್ರಿ ಪೊನ್ನೆತ್ತಳ್ಕ, ಅನಿತಾ ಆಚಾರಿಮೂಲೆ, ಹೇಮಾವತಿ ಚಾಕೋಟೆ, ಕುಂಬ್ರ ಸಿ.ಎ ಬ್ಯಾಂಕಿನ ನಿರ್ದೇಶಕ‌ ಉಮೇಶ್ ಗೌಡ ಕನ್ನಯ, ಮತ್ತು ವಸಂತ ಕುಮಾರ್ ಕೌಡಿಚ್ಚಾರು, ಸಚಿನ್ ಪಾಪೆಮಜಲು, ಸೂರಪ್ಪ ಶೇಖಮಲೆ, ಹರಿಪ್ರಸಾದ್ ಮಾಯಿಲಕೊಚ್ಚಿ, ರವೀಂದ್ರನಾಥ ಗೌಡ, ಜಗದೀಶ ನಾಯ್ಕ ಬೇಂಗತ್ತಡ್ಕ, ಹರೀಶ್ ನಾಯ್ಕ ಪೈಲಕಲ್ಲು ಮತ್ತಿತರರು ಉಪಸ್ಥಿತರಿದ್ದರು. ಪ್ರತಿಭಟನೆಯ ನಂತರ ಪಂಚಾಯತ್ ಪಿ.ಡಿ.ಓ ರವರಿಗೆ ಮನವಿ ಸಲ್ಲಿಸಲಾಯಿತು.ಅರಿಯಡ್ಕ ಶಕ್ತಿ ಕೇಂದ್ರದ ಅಧ್ಯಕ್ಷ ಯುವರಾಜ್ ಪೂಂಜ ಗೊಳ್ತಿಲ ವಂದಿಸಿದರು.

LEAVE A REPLY

Please enter your comment!
Please enter your name here