ಪಂಚಾಯತ್ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ: ಹರಿಪ್ರಸಾದ್ ಯಾದವ್

ವಿಟ್ಲ:ರಾಜ್ಯ ಸರಕಾರದ ವೖಫಲ್ಯವನ್ನು ಖಂಡಿಸಿ ಕೇಪು ಗ್ರಾಮ ಪಂಚಾಯತ್ ಕಛೇರಿ ಎದುರುಗಡೆ ಪ್ರತಿಭಟನೆ ನಡೆಯಿತು. ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಮಾತಾನಾಡಿ, ಪಂಚಾಯತ್ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಹಾಗೂ ಪಂಚಾಯತ್ ಗೆ ನೀಡುವ ಕೆಲವೊಂದು ಸವಲತ್ತುಗಳನ್ನು ಕಡಿತಗೊಳಿಸುವ ಮೂಲಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ ಹಾಗೂ ರಾಜ್ಯ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ ಇರಾನ್ ಮತ್ತು ಇಸ್ರೇಲ್ ಯುದ್ಧದ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಹೇಳಿದರು.
ಸಹಕಾರಿ ಸಂಘದ ಅಧ್ಯಕ್ಷರಾದ ಜನಾರ್ಧನ್ ಭಟ್ ಮಾತನಾಡಿ, ಸರಕಾರ ಜನಸಾಮಾನ್ಯರಿಗೆ ಸಹಕಾರ ನೀಡುವುದನ್ನು ಬಿಟ್ಟು ದ್ರೋಹವನ್ನು ಮಾಡುತ್ತಿದೆ ಎಂದರು.
ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಘವ ಮಣಿಯಾಣಿ ಮಾತನಾಡಿ, ಪಂಚಾಯತ್ ಗೆ ಈ ಹಿಂದೆ ಬಿಜೆಪಿ ಸರಕಾರ ನೀಡುತ್ತಿದ್ದ ಆಶ್ರಯ ಯೋಜನೆಯ ಮನೆ,ಪ್ರಾಕೃತಿಕ ವಿಕೋಪ ಸಂಭವಿಸಿದಾಗ ನೀಡುವ ಪರಿಹಾರವನ್ನು ಕಡಿತಗೊಳಿಸಲಾಗಿದೆ ಹಾಗೂ ಸಿಬ್ಬಂದಿಗಳಿಗೂ ವೇತನ ನೀಡಲು ಈ ಸರಕಾರದಲ್ಲಿ ಹಣವಿಲ್ಲ ಎಂದರು.

ಮಾಜಿ ಅಧ್ಯಕ್ಷರಾದ ತಾರಾನಾಥ ಆಳ್ವಾ ಮಾತಾನಾಡಿ, ಬೆಲೆ ಏರಿಕೆ,ವಿದ್ಯುತ್ ಬಿಲ್ ನಲ್ಲಿಯೂ ಸುಲಿಗೆ ಮಾಡಲು ಈ ಸರಕಾರ ಹೊರಟಿದೆ ಎಂದರು.
ಬಿಜೆಪಿ ಪ್ರಮುಖರಾದ ರಾಧಕೃಷ್ಣ ಶೆಟ್ಟಿ ಸ್ವಾಗತಿಸಿ ಭಾಜಪ ಶಕ್ತೀಕೇಂದ್ರ ಸಂಚಾಲಕರಾದ ರಾಜೇಶ್ ಕರವೀರ ವಂದಿಸಿದರು.ಪಂಚಾಯತ್ ಉಪಾಧ್ಯಕ್ಷರಾದ ಹೇಮಾವತಿ ಪಂಚಾಯತ್ ಸದಸ್ಯರಾದ ಯಶಸ್ವೀನಿ ಶಾಸ್ತ್ರೀ,ಪುರುಷೋತ್ತಮ್ ಗೌಡ, ಜಗಜ್ಜೀವನ್ ರಾಮ್ ಶೆಟ್ಟಿ,ಮೋಹಿನಿ, ಧರ್ಮಲತ, ಸಂತೋಷ್,ವನಿತ ಹಾಗೂ ಪಕ್ಷದ ಪ್ರಮುಖರಾದ ಗೋಪಾಲ ಪಾಟಾಳಿ,ಶ್ರೀಕೃಷ್ಣ,ಮಹಾಲಿಂಗ ಪಾಟಾಳಿ,ಸತೀಶ್ ಕುಕ್ಕೆಬೆಟ್ಟು,ಸತೀಶ್ ಕುದ್ದುಪದವು,ಕಿಟ್ಟಣ್ಣ ರೖ,ಅಶೋಕ ಹಾಗೂ ಬೂತಿನ ಅಧ್ಯಕ್ಷರಾದ ಸುರೇಶ್, ಶ್ರೇಯಸ್, ಪ್ರತೀಕ್ ಮೊದಲಾದವರು ಉಪಸ್ಥಿತರಿದ್ದರು.