ನೆಹರೂನಗರ ಕುಂಞಣ್ಣ ಗೌಡರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ನೆಹರೂನಗರ ನಿವಾಸಿ ಕುಂಞಣ್ಣ ಗೌಡರವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯಕ್ರಮ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆಯಿತು.

ನಿವೃತ್ತ ಪ್ರಾಂಶುಪಾಲ ಸೀತಾರಾಮ ಕೇವಳ ಮಾತನಾಡಿ ಒಬ್ಬ ಸಾತ್ವಿಕ ಮನುಷ್ಯನನ್ನು ಕಳೆದುಕೊಂಡಿದ್ದೇವೆ. ಇವರು ವ್ಯಕ್ತಿತ್ವ, ಪರೋಪಕಾರ, ಸಾತ್ವಿಕ, ಧರ್ಮದಲ್ಲಿ ದೊಡ್ಡಣ್ಣರಾಗಿದ್ದಾರೆ. ಕೆಲಸ ಮತ್ತು ಜೀವನವನ್ನು ಸಮತೋಲನ ಮಾಡಿಕೊಂಡು ಅಜಾತಶತ್ರುವಾಗಿ ಬಾಳಿದವರು. ಆದರ್ಶ ದಾಂಪತ್ಯ ಜೀವನ ನಡೆಸಿದ ಇವರ ಪತ್ನಿ ಕಳೆದ 7 ತಿಂಗಳ ಹಿಂದೆ ಅಗಲಿದ್ದರು. ಕುಂಞಣ್ಣ ಗೌಡರವರು ಮೂಟೆಯಷ್ಟು ಆದರ್ಶವನ್ನು ನಮಗೆ ಬಿಟ್ಟು ಹೋಗಿದ್ದಾರೆ ಎಂದು ಹೇಳಿ ನುಡಿನಮನ ಸಲ್ಲಿಸಿದರು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು. ಮೃತರ ಪುತ್ರರಾದ ವಿಜೇತ್, ವಿಕ್ರಮ್, ಸೊಸೆ ಪುನೀತಾ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here