ಪುತ್ತೂರು: ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ 2025-26ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲ ಚುನಾವಣೆಯ ಮೂಲಕ ಜೂ.11ರಂದು ನಡೆಯಿತು.

ಶಾಲಾ ಮುಖ್ಯಮಂತ್ರಿಯಾಗಿ ಶ್ರೇಯಾಂಕ್ ಎ ಭಂಡಾರಿ ಹಾಗೂ ಉಪಮುಖ್ಯಮಂತ್ರಿಯಾಗಿ ಸಜ್ನಾ ಸಿಝ ಇವರು ಆಯ್ಕೆಯಾಗಿದ್ದು, ಶಾಲಾ ಮಂತ್ರಿ ಮಂಡಲದ ಪದಗ್ರಹಣ ಕಾರ್ಯಕ್ರಮವು ಜೂ.23ರಂದು ಶಾಲಾ ಸಭಾಂಗಣದಲ್ಲಿ ನೆರವೇರಿತು.
ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅ। ವಂ। ಸ್ವಾಮಿ। ಲಾರೆನ್ಸ್ ಮಸ್ಕರೇನ್ಹಸ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೂಜ್ಯ ಸಂಚಾಲಕರು, “ವಿದ್ಯಾರ್ಥಿಗಳು ಸದಾ ಸೇವೆಗೆ ಸಿದ್ಧರಾಗಿರಬೇಕು, ಇತರರಿಗೆ ಸಹಾಯ ಮಾಡಬೇಕು, ಸಣ್ಣ ಪುಟ್ಟ ಕೆಲಸ ಮಾಡಲು ಆಸಕ್ತಿ ತೋರಬೇಕು. ಶಾಲೆಯಲ್ಲಿ ನೀಡುವ ಸೌಲಭ್ಯಗಳನ್ನು ಬಳಸುವುದಷ್ಟೇ ಅಲ್ಲ ಅವುಗಳನ್ನು ಕಾಪಾಡುವ ಜವಾಬ್ದಾರಿ ಎಲ್ಲಾ ವಿದ್ಯಾರ್ಥಿಗಳದ್ದು. ಅದೇ ರೀತಿ ಶಾಲೆಯನ್ನು ಶುಚಿಯಾಗಿಟ್ಟು, ಶಿಕ್ಷಕರಿಗೆ ವಿಧೇಯರಾಗಿರಬೇಕು ಎಂಬ ಸಂದೇಶ ನೀಡಿ ಆಶೀರ್ವದಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಯಂತ ಉರ್ಲಾಂಡಿ ಹಾಗೂ ಮುಖ್ಯ ಶಿಕ್ಷಕಿ ಜಾನೆಟ್ ಡಿಸೋಜರವರು ಎಲ್ಲರಿಗೂ ಶುಭಹಾರೈಸಿದರು.
ಮುಖ್ಯ ಶಿಕ್ಷಕಿ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಶ್ರೇಯಾಂಕ್ ಎ ಭಂಡಾರಿ, ಉಪಮುಖ್ಯಮಂತ್ರಿ ಸಜ್ನಾ ಸಿಝ, ಸಭಾಪತಿ ಶ್ರೀಹಾ ಜಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಮಂತ್ರಿಮಂಡಲದ ಸದಸ್ಯರು, ವಿರೋಧ ಪಕ್ಷದ ಸದಸ್ಯರು ವೇದಿಕೆಯ ಮುಂಭಾಗದಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಶ್ರೇಯಾಂಕ್ ಎ ಭಂಡಾರಿ ಸ್ವಾಗತಿಸಿ, ಉಪಮುಖ್ಯಮಂತ್ರಿ ಸಜ್ನಾ ಸಿಝ ವಂದಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನೆರವೇರಿಸಿದರು. ಆಯಿಷತುಲ್ ಅಲ್ಸಾನಾ ಕಾರ್ಯಕ್ರಮ ನಿರೂಪಿಸಿದರು.