ಕಡಬ: ಎಸ್.ವೈ.ಎಸ್ ಕಡಬ ಝೊನ್ ವತಿಯಿಂದ Z TEAM TALK LEADERS MEET ನಿಂತಿಕಲ್ಲು ಮದರಸ ಸಭಾಂಗಣದಲ್ಲಿ ಜೂ.22ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ಝೊನ್ ಸಮಿತಿಯ ಅಧ್ಯಕ್ಷ ಕೆ.ಎಚ್ ಹಂಝ ಕಳಾರ ವಹಿಸಿದ್ದರು. ಬಹು. ಯುಸುಫ್ ಸಖಾಫಿ ದುವಾ ನೆರವೇರಿಸಿದರು. ಬದ್ರಿಯಾ ಜುಮಾ ಮಸ್ಜಿದ್ನ ಖತೀಬರಾದ ಜಾಫರ್ ಸಅದಿ ಪಳ್ಳತ್ತೂರು ಕಾರ್ಯಕ್ರಮ ಉದ್ಘಾಟಿಸಿದರು. ಸುನ್ನೀ ಯುವಜನ ಸಂಘ ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಮೊಂಟುಗೊಳಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಸುನ್ನೀ ಯುವಜನ ಸಂಘ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಮಾಡಾವು ದಿಕ್ಸೂಚಿ ಭಾಷಣ ಮಾಡಿದರು.
ಎಸ್ ವೈ ಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಕೋಶಾಧಿಕಾರಿ ಬಹು ಶಾಫಿ ಸಖಾಫಿ ಕೊಕ್ಕಡ ಮತ್ತು ಕಡಬ ಝೋನ್ ಉಸ್ತುವಾರಿ ಖಾಸಿಂ ಉಸ್ತಾದ್ ಮಾಚಾರ್, ಎಸ್.ವೈ.ಎಸ್ ಜಿಲ್ಲಾ ಸಮಿತಿ ಸದಸ್ಯ ಜಮಾಲುದ್ದೀನ್ ಲತೀಫಿ ಮದ್ದಡ್ಕ ಶುಭ ಹಾರೈಸಿದರು. ಎಸ್.ವೈ.ಎಸ್ ಕಡಬ ಝೋನ್ ಕೋಶಾಧಿಕಾರಿ ಝಿಯಾರ್ ಕೋಡಿಂಬಾಳ, ನಿಂತಿಕಲ್ ಜಮಾತ್ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.


ಎಸ್.ವೈ.ಎಸ್ ಕಡಬ ಝೋನ್ ದಹ್ವಾ ಉಪಾಧ್ಯಕ್ಷ ಉಸ್ಮಾನ್ ಜೌಹರಿ ನೆಲ್ಯಾಡಿ ಸ್ವಾಗತಿಸಿ, ದಹ್ವಾ ಕಾರ್ಯದರ್ಶಿ ಅಝೀಝ್ ಸಅದಿ ವಂದಿಸಿದರು. ಪ್ರಧಾನ ಕಾರ್ಯಧರ್ಶಿ ಫಾರೂಕ್ ಎನ್.ಕೆ ಕಾರ್ಯಕ್ರಮ ನಿರ್ವಹಿಸಿದರು. ಕಡಬ, ಸವಣೂರು, ನಿಂತಿಕಲ್ಲು, ನೆಲ್ಯಾಡಿ ಸರ್ಕಲ್ ವ್ಯಾಪ್ತಿಯ ಹಲವರು ನಾಯಕರು ಭಾಗವಹಿಸಿದ್ದರು.