ಪುತ್ತೂರು: ಪಂಜಳ ಪೆರಿಯಡ್ಕ ನಿವಾಸಿ ವೀರಪ್ಪ ಆಚಾರ್ಯ (86 ವ.) ಬುಧವಾರ ಮಧ್ಯಾಹ್ನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಇವರು ಸುಮಾರು 30 ವರ್ಷಗಳಿಂದ ವಿಶ್ವಕರ್ಮ ಸಮುದಾಯಕ್ಕೆ ಸಂಬಂಧಪಟ್ಟ ಮಂಗಳೂರು ಶ್ರೀ ವಿನಾಯಕ ಕಾಳಿಕಾಂಭ ದೇವಸ್ಥಾನದ ಕುಡ್ಚಿಲ ಕೂಡುವಳಿಕೆಯ ಮೊಕ್ತೇಸರರಾಗಿದ್ದರು.
ಪತ್ನಿ ಶಾರದಾ, ಮಕ್ಕಳಾದ ರಾಘವೇಂದ್ರ, ಶ್ರೀಧರ, ಪುತ್ರಿಯರಾದ ಜಯಂತಿ, ರತ್ನಾವತಿ, ಸುಜಾತಾ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.