ಕೊರಮೇರು: ಬಿರುಗಾಳಿಗೆ ಅಡಿಕೆ, ರಬ್ಬರ್ ಕೃಷಿಗೆ ಹಾನಿ

0

ನೆಲ್ಯಾಡಿ: ಕಳೆದ ರಾತ್ರಿ ಬೀಸಿದ ಬಿರುಗಾಳಿಗೆ ಇಚ್ಲಂಪಾಡಿ ಗ್ರಾಮದ ಕೊರಮೇರು ಭಾಗದಲ್ಲಿ ಅಡಿಕೆ, ರಬ್ಬರ್ ಕೃಷಿಗೆ ವ್ಯಾಪಕ ಹಾನಿಯಾಗಿದೆ.


ಕೊರಮೇರು ನಿವಾಸಿ ರಮೇಶ್ ಗೌಡ ಎಂಬವರ ತೋಟದಲ್ಲಿ 200ಕ್ಕೂ ಹೆಚ್ಚು ಫಸಲು ಭರಿತ ಅಡಿಕೆ ಮರಗಳು ಮುರಿದು ಬಿದ್ದಿವೆ. ಇವರ ಜಾಗದ ಪಕ್ಕದಲ್ಲಿನ ಕೆ.ಇ.ತೋಮಸ್ ಎಂಬವರ ೨೫೦ಕ್ಕೂ ಹೆಚ್ಚು ರಬ್ಬರ್ ಮರಗಳು ಮುರಿದು ಬಿದ್ದಿವೆ. ಘಟನಾ ಸ್ಥಳಕ್ಕೆ ಇಚ್ಲಂಪಾಡಿ ಗ್ರಾಮದ ಗ್ರಾಮಸಹಾಯಕ ಅನಿಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ತಯಾರಿಸಿದ್ದಾರೆ.

LEAVE A REPLY

Please enter your comment!
Please enter your name here