ವಿವೇಕಾನಂದ ಶಿಶುಮಂದಿರದ 27ನೇ ಶ್ರೀಕೃಷ್ಣ ಲೋಕ ಕಾರ್ಯಕ್ರಮ ಸಮಿತಿ ರಚನೆ : ಅಧ್ಯಕ್ಷರಾಗಿ ಉದ್ಯಮಿ ಮೋಹನ್ ಕೆ ಆಯ್ಕೆ

0

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಅಧೀನ ನಡೆಯುತ್ತಿರುವ ವಿವೇಕಾನಂದ ಶಿಶು ಮಂದಿರದ 27ನೇ ಶ್ರೀಕೃಷ್ಣ ಲೋಕ ಕಾರ್ಯಕ್ರಮ ಸಮಿತಿ ಗುರುವಾರ (ಜೂನ್ 26) ರಚನೆಯಾಗಿದ್ದು, ಉದ್ಯಮಿ ಮೋಹನ್ ಕೆ ಅವರು ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಶಿವಪೇಟೆ ಪರ್ಲಡ್ಕದಲ್ಲಿರುವ ವಿವೇಕಾನಂದ ಶಿಶು ಮಂದಿರದಲ್ಲಿ ಇಂದು ನಡೆದ ಸಭೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಉಪಾಧ್ಯಕ್ಷರಾಗಿ ಮಾಲಿನಿ ಕಶ್ಯಪ್, ಕಾರ್ಯದರ್ಶಿಯಾಗಿ ಕಿರಣ ಶಂಕರ್ ಮಲ್ಯ, ಕೋಶಾಧಿಕಾರಿಯಾಗಿ ಬ್ರಿಜೇಶ್ ರೈ ಸಣಂಗಳ, ಜೊತೆ ಕಾರ್ಯದರ್ಶಿಯಾಗಿ ಅಮಿತ್ ಅವರನ್ನು ನೇಮಕ ಮಾಡಲಾಗಿದೆ. ಸದಸ್ಯರಾಗಿ ರಮ್ಯ ಭಟ್ಟ, ರುಕ್ಮಯ ಕುಲಾಲ್, ಉಮೇಶ್ ಕುಮಾರ್ ಶಿಮ್ಲಡ್ಕ, ಮನೋಜ್ ಶಣೈ ಅವರನ್ನು ನೇಮಕ ಮಾಡಲಾಗಿದೆ.


ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಶಿಶುಮಂದಿರದ ಅಧ್ಯಕ್ಷರಾದ ರಾಜಗೋಪಾಲ್ ಭಟ್ ಸಂಚಾಲಕರಾದ ಅಕ್ಷಯ್ ಕುಮಾರ ಮತ್ತು ಆಡಳಿತ ಮಂಡಳಿಯ ಸದಸ್ಯರು ಮಾತಾಜಿಗಳು ಪಾಲಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here