ಕೂರತ್ ಉರೂಸ್: ಇಂದು(ಜೂ.27) ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್, ಸ್ಪೀಕರ್ ಯು.ಟಿ ಖಾದರ್ ಆಗಮನ

0

ಪುತ್ತೂರು: ಖುರ್ರತುಸ್ಸಾದಾತ್ ಕೂರತ್ ಉರೂಸ್ ಕಾರ್ಯಕ್ರಮದ ಎರಡನೇ ದಿನವಾದ ಜೂ.27ರಂದು ಮದ್ಯಾಹ್ನ ಶಾದ್ಸುಲಿ ರಾತೀಬ್ ನಡೆಯಲಿದ್ದು ಸಂಜೆ ಗಂಟೆ 4ಕ್ಕೆ ಬುರ್ದಾ ಮಜ್ಲಿಸ್ ನಡೆಯಲಿದೆ. ಸಂಜೆ ಗಂಟೆ 7ಕ್ಕೆ ಅಹ್ಲುಲ್ ಅಬಾಹ್ ಮೌಲೀದ್ ನಡೆಯಲಿದೆ.


ರಾತ್ರಿ ನೂರೇ ಫಝಲ್ ಕಾನ್ಫರೆನ್ಸ್ ನಡೆಯಲಿದ್ದು ಸಯ್ಯದ್ ಅಬ್ದುರ್ರಹ್ಮಾನ್ ಮಸ್ಹೂದ್ ತಂಙಳ್ ಕೂರತ್ ಅಧ್ಯಕ್ಷತೆ ವಹಿಸಲಿದ್ದಾರೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಉದ್ಘಾಟಿಸಲಿದ್ದಾರೆ. ಪೋನ್ಮಲ ಅಬ್ದುಲ್ ಖಾದಿರ್ ಮುಸ್ಲಿಯಾರ್, ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ,ಸ್ಪೀಕರ್ ಯು.ಟಿ ಖಾದರ್, ಶಾಫಿ ಸಅದಿ ಬೆಂಗಳೂರು, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ರಾಜ್ಯ ಸಭೆಯ ಸಂಸದ ಸೈಯ್ಯದ್ ನಾಸಿರ್ ಹುಸೇನ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here