✍🏻 ಸತ್ಯೇಶ ಕೆದಿಲಾಯ
ಬೆಳಗಾಂ ಜಿಲ್ಲೆಯ ಸಣ್ಣ ಹಳ್ಳಿ ನಿಂಬಾಳ್ನಲ್ಲಿ ಶ್ರೀಗುರುದೇವ ರಾನಡೆಯವರ ಆಶ್ರಮ ಇದೆ. ಅಕ್ಟೋಬರ್ 2015ರಲ್ಲಿ ನಾನು ಅಲ್ಲಿಗೆ ಹೋಗಿದ್ದೆ. ಅಲ್ಲಿ ರಾನಡೆಯವರ ಜಾಗೃತ ಸಮಾಧಿ ಇದೆ., ಸಮಾಧಿಯ ಗೋಡೆಯಲ್ಲಿ ಅವರ ದೊಡ್ಡ ಭಾವಚಿತ್ರದೊಂದಿಗೆ ಅವರು 1912 ರಲ್ಲಿ ಬರೆದ ಒಂದು ಲೇಖನವನ್ನು ಪೈಂಟ್ ಮಾಡಿ ಬರೆದಿದ್ದಾರೆ. ಇಂದಿಗೂ ಪ್ರಸ್ತುತವಾದ ಅವರ ಅದ್ಭುತ ಮಾತುಗಳನ್ನು ನೀವೂ ಓದಿ ಬೆರಗಾಗಬಹುದು!.
- ಭಾರತದ ಅಭಿವೃದ್ಧಿ ಆಗುವುದಾದರೆ ಅದು ಇನ್ನೂ ಈ ವರೆಗೆ ಎಲ್ಲ ಇತಿಹಾಸವೇ ಅರಿಯದಂಥ ಒಂದು ಅಲೌಕಿಕ ದೃಷ್ಟಿಯಿಂದ ಆಗಲಿರುವುದು.
- ಅದು ಪೂರ್ವ, ಪಶ್ಚಿಮ ದೇಶಗಳ ಸದ್ಗುಣಗಳನ್ನು ಕೂಡಿಸಿ ಶ್ರೇಷ್ಟತೆ ಪಡೆಯುವುದು.
- ಪೂರ್ವ, ಪಶ್ಚಿಮ ದೇಶಗಳು ಒಟ್ಟೋಟ್ಟಿಗೆ ಸೇರುವುದಾದರೆ ಅವು ಭಾರತದಲ್ಲೇ ಸೇರುವುದು.
- ಭಾರತವು ತನ್ನ ಮೂಢನಂಬಿಕೆಗಳನ್ನು ಮೈಗಳ್ಳತನವನ್ನು ಮತ್ತು ಬೌದ್ಧಿಕ ಜಾಡ್ಯಯವನ್ನು ಎಸೆದು ಬಿಡುವುದನ್ನು ನಾನು ಕಾಣುತ್ತಿರುವೆ.
- ಭಾರತ ಯುರೋಪಿನ ವೈಜ್ಞಾನಿಕ ಉಲ್ಲಾಸವನ್ನು ಸಾಮಾರ್ಥ್ಯವನ್ನು ಪಡೆಯುತ್ತಿರುವುದನ್ನು ನೋಡುತ್ತಿರುವೆ
- ಭಾರತ ಪೂರ್ವ ಪಶ್ಚಿಮ ದೇಶಗಳ ಅತ್ಯುತ್ತಮ ಗುಣಗಳನ್ನು ಜೀರ್ಣಿಸಿಕೊಂಡು ಆಧುನಿಕ ರಾಷ್ಟ್ರಗಳ ಉನ್ನತ ದರ್ಜೆಯನ್ನು ಪಡೆಯುತ್ತಾ ಅದರ ಜೊತೆಗೆಯೇ ತನ್ನ ಅಧ್ಯಾತ್ಮಿಕ ಪವಿತ್ರತೆ, ಈಗಿನ ರೀತಿಗಳಿಂದ ಕಲುಶಿತವಾಗದ ಭಾವ ಶುದ್ಧಿ ಮತ್ತು ಸಮಗ್ರತೆಯನ್ನು ಕಾಯ್ದುಕೊಳ್ಳುವುದನ್ನು ಕಾಣುತ್ತಿರುವೆ !