ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆ 6ನೇ ವರ್ಷಕ್ಕೆ ಪಾದಾರ್ಪಣೆ-ಶಾಖಾ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀ ಪೂಜೆ

0

ಆಲಂಕಾರು: ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಪ್ರಾಯೋಜಿತ ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಬಿಲ್ಡಿಂಗ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆಯು ಯಶಸ್ವಿ 6ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಆಲಂಕಾರು ಶ್ರೀ ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಶಾಖಾ ಕಚೇರಿಯಲ್ಲಿ ಜೂ.27ರಂದು ಬೆಳಿಗ್ಗೆ ಗಣಹೋಮ, ಲಕ್ಷ್ಮೀಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ೨೦೦೨ರಲ್ಲಿ ಪುತ್ತೂರಿನಲ್ಲಿ ಆರಂಭಗೊಂಡಿದ್ದು 2019ರಲ್ಲಿ 6ನೇ ಶಾಖೆ ಆಲಂಕಾರಿನಲ್ಲಿ ಆರಂಭಗೊಂಡಿದೆ. ಪ್ರಸ್ತುತ ಸಂಘವು 10 ಶಾಖೆಗಳನ್ನು ಹೊಂದಿದ್ದು ಗ್ರಾಹಕರ ಸಹಕಾರದೊಂದಿಗೆ ಎಲ್ಲಾ ಶಾಖೆಗಳಲ್ಲೂ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಯುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸಂಘವು ಒಟ್ಟು ರೂ.744 ಕೋಟಿಗೂ ಹೆಚ್ಚು ವ್ಯವಹಾರ ನಡೆಸಿದೆ ಎಂದರು. ಆಲಂಕಾರು ಶಾಖೆಯು ಯಶಸ್ವಿಯಾಗಿ 5 ವರ್ಷಗಳನ್ನು ಪೂರೈಸಿ 6ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಭಾಗದ ಗ್ರಾಹಕರ ಸಹಕಾರದೊಂದಿಗೆ ಸಂಘವು ಅತ್ಯುತ್ತಮ ರೀತಿಯಲ್ಲಿ ವ್ಯವಹಾರ ನಡೆಸುತ್ತಿದೆ. 2024-25ನೇ ಸಾಲಿನಲ್ಲಿ ಆಲಂಕಾರು ಶಾಖೆಯಲ್ಲಿ ಒಟ್ಟು 64.61 ಕೋಟಿ ರೂ.ವ್ಯವಹಾರ ನಡೆದಿದೆ. 11.42ಕೋಟಿ ರೂ.ಠೇವಣಿ ಸಂಗ್ರಹವಾಗಿದೆ. 11.39 ಕೋಟಿ ರೂ.ಸಾಲ ವಿತರಣೆ ಮಾಡಿದೆ. ಸತತ 5ನೇ ವರ್ಷವೂ ಶೇ.೧೦೦ ಸಾಲ ವಸೂಲಾತಿಯ ಸಾಧನೆ ಮಾಡಿದೆ. ಎಲ್ಲರ ಸಹಕಾರದಿಂದ ಸಂಘ ನಿರಂತರವಾಗಿ ಬೆಳವಣಿಗೆಯಾಗುತ್ತಿದೆ ಎಂದು ಹೇಳಿದರು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಗೌಡ ಯು.ಪಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ನಿರ್ದೇಶಕರಾದ ಜಿನ್ನಪ್ಪ ಗೌಡ ಮುಳುವೇಲು, ಸುದರ್ಶನ ಗೌಡ ಕೆ., ಸತೀಶ ಪಾಂಬಾರು, ಪ್ರವೀಣ್ ಕುಂಟ್ಯಾನ, ಸುಪ್ರೀತಾರವಿಚಂದ್ರ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ ಗೌಡ ಕಣಜಾಲು, ಮಾಜಿ ನಿರ್ದೇಶಕ ಚಂದ್ರಶೇಖರ ಗೌಡ ಬ್ರಂತೋಡು, ಆಲಂಕಾರು ಶಾಖಾ ಸಲಹಾ ಸಮಿತಿ ಗೌರವ ಸಲಹೆಗಾರರಾದ ಈಶ್ವರ ಗೌಡ ಪಜ್ಜಡ್ಕ, ನಾಗಪ್ಪ ಗೌಡ ಮರುವಂತಿಲ, ಸದಸ್ಯರಾದ ಚಕ್ರಪಾಣಿ ಬಾಕಿಲ, ರಾಮಣ್ಣ ಗೌಡ ಬಿ.ದೋಳ, ಅಶೋಕ ಗೌಡ ಪಜ್ಜಡ್ಕ, ಶೇಖರ ಗೌಡ ಕಟ್ಟಪುಣಿ, ಶಿವಣ್ಣ ಗೌಡ ಕಕ್ವೆ, ಕೇಶವ ಗೌಡ ಆಲಡ್ಕ, ದಯಾನಂದ ಗೌಡ ಆಲಡ್ಕ, ಸದಾನಂದ ಗೌಡ ಕುಂಟ್ಯಾನ, ರಾಮಣ್ಣ ಗೌಡ ಸುರುಳಿ, ಬಾಲಕೃಷ್ಣ ಗೌಡ ಸಂಪ್ಯಾಡಿ, ತಿಮ್ಮಪ್ಪ ಗೌಡ ಸಂಕೇಶ, ಸುಂದರ ಗೌಡ ಕುಂಡಡ್ಕ, ಸುಂದರ ಗೌಡ ನೆಕ್ಕಿಲಾಡಿ, ಪದ್ಮಪ್ಪ ಗೌಡ ಕೆದುಂಬಾಡಿ, ಮಂಜಪ್ಪ ಗೌಡ ಕಜೆ, ಭವಾನಿಶಂಕರ ಗೌಡ ಪರಂಗಾಜೆ, ಆಲಂಕಾರು ಆದಿತ್ಯ ಕ್ಲಿನಿಕ್‌ನ ಡಾ.ಆಕಾಶ್ ಭಟ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಆಲಂಕಾರು ಶಾಖಾ ಮೇನೇಜರ್ ದೀಪಾ, ಸಿಬ್ಬಂದಿಗಳಾದ ಮಲ್ಲಿಕಾ, ಗೋಪಾಲಕೃಷ್ಣ, ತುಕರಾಂ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ವ್ಯವಸ್ಥಾಪಕ ಆನಂದ ಗೌಡ ಪಜ್ಜಡ್ಕ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ, ಕೆನರಾ ಬ್ಯಾಂಕ್‌ನ ಆಲಂಕಾರು ಶಾಖಾ ಸಿಬ್ಬಂದಿ ಸೀತಾರಾಮ, ಗ್ರಾಹಕರಾದ ಪ್ರಕಾಶ್ ಬಾಕಿಲ, ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಧರ್ಣಪ್ಪ ಗೌಡ ಅಲೆಪ್ಪಾಡಿ, ಮಾಯಿಲಪ್ಪ ಗೌಡ ಅಲೆಪ್ಪಾಡಿ, ರಾಧಾಕೃಷ್ಣ ರೈ ಪರಾರಿಗುತ್ತು, ಬಾಲಕೃಷ್ಣ ಗೌಡ ಕತ್ಲಡ್ಕ ಕೊಂಡ್ಯಾಡಿ, ರಾಮಣ್ಣ ಗೌಡ ಪರಾರಿ, ಕುಶಾಲಪ್ಪ ಗೌಡ ಸುರುಳಿ, ಮೋನಪ್ಪ ಗೌಡ ಕಕ್ವೆ, ಶಿವರಾಮ ಗೌಡ ಆತೂರು, ಪೂವಪ್ಪ ಗೌಡ ಇಚ್ಚೂರು, ಶ್ರೀಧರ ಗೌಡ ಇಚ್ಚೂರು, ರಾಘವ ಗೌಡ ಇಚ್ಚೂರು, ಲಲಿತಾ ಬಾಕಿಲ, ಮೋಹಿನಿ ಪಟ್ಟೆ, ಕುಶಾಲಪ್ಪ ಗೌಡ ಕುಂತೂರುಕಜೆ, ಮಾಯಿಲಪ್ಪ ಗೌಡ ನೆಕ್ಕಿಲಾಡಿ, ನೋಣಯ್ಯ ಗೌಡ ಪಲ್ಲದಕೋಡಿ, ಯೋಗೀಶ ಆಚಾರ್ಯ ಆಲಂಕಾರು, ದಾಮೋದರ ಗೌಡ ಕಕ್ವೆ, ಲೀಲಾವತಿ ಮಡೆಂಜಿಮಾರ್, ಸಂಘದ ಕುಂಬ್ರ ಶಾಖಾ ವ್ಯವಸ್ಥಾಪಕ ಹರೀಶ್, ಕಾಣಿಯೂರು ಶಾಖಾ ವ್ಯವಸ್ಥಾಪಕ ಪದ್ಮಶ್ರೀ, ಕಡಬ ಶಾಖಾ ಸಿಬ್ಬಂದಿ ಚೇತನ್, ಪುತ್ತೂರು ಶಾಖಾ ಸಿಬ್ಬಂದಿ ಯಶ್ವಿತ್, ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆಲಂಕಾರು ಶಾಖಾ ಮೇನೇಜರ್, ಸಿಬ್ಬಂದಿಗಳು, ಬಂಟಸಿರಿ ವಿವಿಧೋದ್ದೇಶ ಸಹಕಾರಿ ಸಂಘದ ಆಲಂಕಾರು ಶಾಖಾ ಸಿಬ್ಬಂದಿಗಳು ಸಹಿತ ನೂರಾರು ಮಂದಿ ಭೇಟಿ ನೀಡಿ ಶುಭಹಾರೈಸಿದರು.

ಗೌರವಾರ್ಪಣೆ:
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖಾ ಸಲಹಾ ಸಮಿತಿ ಸದಸ್ಯರಾಗಿದ್ದು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಗೊಂಡ ಕೇಶವ ಗೌಡ ಆಲಡ್ಕ ಹಾಗೂ ಪದ್ಮಪ್ಪ ಗೌಡ ಕೆದುಂಬಾಡಿ ಅವರಿಗೆ ಸಂಘದ ಅಧ್ಯಕ್ಷರು ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಿದರು. ಆಲಂಕಾರು ಶಾಖಾ ಸಿಬ್ಬಂದಿಯಾಗಿದ್ದು ನೆಲ್ಯಾಡಿ ಶಾಖೆಗೆ ವರ್ಗಾವಣೆಗೊಂಡ ವಿಜಯಕುಮಾರ್ ಎಂ.ಅವರನ್ನೂ ಗೌರವಿಸಲಾಯಿತು.

ಗಣಹೋಮ/ಲಕ್ಷ್ಮೀ ಪೂಜೆ:
ಶಾಖಾ ಕಚೇರಿಯಲ್ಲಿ ಬೆಳಿಗ್ಗೆ ಗಣಹೋಮ ಹಾಗೂ ಲಕ್ಷ್ಮೀ ಪೂಜೆ ನಡೆಯಿತು. ಸುಬ್ರಹ್ಮಣ್ಯ ಬಳ್ಳಕ್ಕುರಾಯ ಅವರು ಪೂಜೆ ನೆರವೇರಿಸಿದರು.

ಸಂಘದ ನಿರ್ದೇಶಕಿಯಾಗಿದ್ದು ಆಲಂಕಾರು ಶಾಖಾ ಸಲಹಾ ಸಮಿತಿ ಅಧ್ಯಕ್ಷೆಯಾಗಿರುವ ತೇಜಸ್ವಿನಿ ಕಟ್ಟಪುಣಿ ಸ್ವಾಗತಿಸಿ, ಆಲಂಕಾರು ಶಾಖಾ ವ್ಯವಸ್ಥಾಪಕ ಪ್ರೀತಮ್ ಎಂ.ವಂದಿಸಿದರು. ಸಿಬ್ಬಂದಿಗಳಾದ ನವ್ಯ ಪಿ., ರಾಜೇಶ್ ಪಿ., ಪಿಗ್ಮಿ ಸಂಗ್ರಾಹಕರಾದ ನವೀನ, ಯೋಗೀಶ, ಕೀರ್ತಿಕಾ, ದೀಕ್ಷಿತ್ ಸಹಕರಿಸಿದರು.

LEAVE A REPLY

Please enter your comment!
Please enter your name here