ಅಧ್ಯಕ್ಷರಾಗಿ :ಡಾ. ಹಾಜಿ ಎಸ್ ಅಬೂಬಕ್ಕರ್, ಉಪಾಧ್ಯಕ್ಷರಾಗಿ: ಲಲಿತಾ ಸೂರಂಬೈಲು,ಕಾರ್ಯದರ್ಶಿಯಾಗಿ : ಭಾಸ್ಕರ ಪೂಜಾರಿ ನಡುಕಟ್ಟ
ನಿಡ್ಪಳ್ಳಿ: ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ಟರ ಅಧ್ಯಕ್ಷತೆಯಲ್ಲಿ ಮಕ್ಕಳ ಪೋಷಕರ ಸಭೆ ಜೂ. 28ರಂದು ನಡೆಯಿತು. ಸಭೆಯಲ್ಲಿ 2025-26 ನೇ ಸಾಲಿನ ರಕ್ಷಕ ಶಿಕ್ಷಕ ಸಂಘ ಹಾಗೂ ಇತರ ಸಮಿತಿಗಳನ್ನು ರಚಿಸಲಾಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶಾಲಾ ಹಿರಿಯ ವಿದ್ಯಾರ್ಥಿ ಡಾ.ಹಾಜಿ ಎಸ್ ಅಬೂಬಕ್ಕರ್ ಅರ್ಲಪದವು, ಉಪಾಧ್ಯಕ್ಷರಾಗಿ ಲಲಿತಾ ಸೂರಂಬೈಲು ಹಾಗೂ ಕಾರ್ಯದರ್ಶಿಯಾಗಿ ಭಾಸ್ಕರ ಪೂಜಾರಿ ನಡುಕಟ್ಟ ಆಯ್ಕೆಯಾದರು.
ಪುರಂದರ ಒಡ್ಯ, ಬಶೀರ್ ಪಾರ್ಪಳ, ಅಬ್ದುಲ್ ಆರಿಫ್ ತಲಪ್ಪಾಡಿ, ಭವಾನಿ ಸೂರಂಬೈಲು, ರೂಪ ಬಿ ಸ್ವರ್ಗ, ಅಣ್ಣಪ್ಪ ನಾಯ್ಕ ಭರಣ್ಯ, ವೇಣುಗೋಪಾಲ ಕೆದುವಾರು, ಸತೀಶ್ ಆರ್ಲಪದವು, ಕೃಷ್ಣ ಮೋಹನ ಸ್ವರ್ಗ, ಹಮೀದ್ ಕೆದುವಾರು, ರಫೀಕ್ ಕಕ್ಕೂರು, ಹೇಮಾವತಿ ಸೂರಂಬೈಲು ಇವರನ್ನು ಸದಸ್ಯರಾಗಿ ಆರಿಸಲಾಯಿತು.
ಅಕ್ಷರ ದಾಸೋಹ ತಾಯಂದಿರ ಸಮಿತಿ ಸದಸ್ಯರಾಗಿ ಸವಿತಾ ಮಿತ್ತಡ್ಕ, ಲತಾ ತೂಂಬಡ್ಕ, ಜಯಲಕ್ಷ್ಮಿ ಸ್ವರ್ಗ, ವಸಂತಿ ತೂಂಬಡ್ಕ, ಸುಮತಿ ಅರ್ಧಮೂಲೆ, ಮೈಮುನ ಅರ್ಲಪದವು, ಫಾತಿಮತ್ ರಜಿಯ ತಲಪ್ಪಾಡಿ, ಕವಲತ್ ನೆಲ್ಲಿತ್ತಿಮಾರು, ಜಯಶ್ರೀ ತೂಂಬಡ್ಕ, ವೀಣಾ ಕಲ್ಲಪದವು, ಪ್ರಮೀಳಾ ತೂಂಬಡ್ಕ ಇವರನ್ನು ಆರಿಸಲಾಯಿತು.
ಮಕ್ಕಳ ಸುರಕ್ಷತಾ ಸಮಿತಿ ಸದಸ್ಯರಾಗಿ ಮಹಾಲಿಂಗ ನಾಯ್ಕ ಅರ್ಧಮೂಲೆ, ಮಮತಾ ತೂಂಬಡ್ಕ, ಚಂದ್ರಾವತಿ ಅರ್ಧಮೂಲೆ, ಪುಷ್ಪ ಮಲೆತ್ತಡ್ಕ ಸ್ವರ್ಗ, ಕುಶಾಲಪ್ಪ ಗೌಡ ಮಿತ್ತಡ್ಕ, ಅಂಬಿಕಾ ಭರಣ್ಯ, ಪ್ರೇಮ ಪಡ್ಯಂಬೆಟ್ಟು, ಸಿದ್ದೀಕ್ ಕಲ್ಲಪದವು, ಸೀತಾ ಕಾಕೆಕೊಚ್ಚಿ ಇವರನ್ನು ಆರಿಸಲಾಯಿತು.
ವಿದ್ಯಾರ್ಥಿನಿ ಸಿಂಚನ .ಎಸ್ ಪ್ರಾರ್ಥಿಸಿ ಮುಖ್ಯ ಶಿಕ್ಷಕಿ ನಿರ್ಮಲ ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ಎಸ್. ಪಿ ಶಾಲೆಯಲ್ಲಿ ಮಕ್ಕಳು ಅನುಸರಿಸಬೇಕಾದ ನಿಯಮಗಳು ಮತ್ತು ನಿಬಂಧನೆಗಳನ್ನು ಪೋಷಕರಿಗೆ ತಿಳಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಹ ಶಿಕ್ಷಕರು ಸಹಕರಿಸಿದರು.