‘ನನ್ನ ಮಗಳಿಗೆ ನ್ಯಾಯ ಸಿಗದಿದ್ದರೆ ನಾವು ಬಿಡುವುದಿಲ್ಲ’ – ಮದುವೆಯಾಗುವುದಾಗಿ ನಂಬಿಸಿ ವಂಚನಾ ಪ್ರಕರಣದಲ್ಲಿ ಸಂತ್ರಸ್ತೆ ತಾಯಿಯಿಂದ ಪತ್ರಿಕಾಗೋಷ್ಠಿ

0

ಪುತ್ತೂರು: ʼನನ್ನ ಮಗಳಿಗೆ ಪ್ರಪೋಸ್ ಮಾಡಿ ಮದುವೆಯಾಗುವುದಾಗಿ ನಂಬಿಸಿದ ಯುವಕ ಮಗಳು ಗರ್ಭವತಿಯಾದಾಗ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಇದೀಗ ಆಕೆ ಮಗುವಿಗೆ ಜನ್ಮವೆತ್ತಿದ್ದಾಳೆ. ಹಿಂದೂ ಸಂಘಟನೆಯ ಮುಖಂಡರಿಂದಲೂ, ಶಾಸಕರಿಂದಲೂ, ಪೊಲೀಸರಿಂದಲೂ ನ್ಯಾಯ ಸಿಗಲಿಲ್ಲ. ನಮಗೆ ಎಲ್ಲಿ ನೋಡಿದರೂ ನ್ಯಾಯ ಸಿಗುತ್ತಿಲ್ಲ. ನಮಗೆ ನ್ಯಾಯ ಸಿಗದಿದ್ದರೆ ನಾವು ಬಿಡುವುದಿಲ್ಲ. ಎಲ್ಲಿಯೂ ಪ್ರತಿಭಟನೆಗೂ ಸಿದ್ಧ ಎಂದು ಸಂತ್ರಸ್ತೆ ಯುವತಿಯ ತಾಯಿ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಪಿ.ಜಿ.ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ.ರಾವ್‌ಗೆ ನನ್ನ ಮಗಳೊಂದಿಗೆ ಲವ್ ಇತ್ತು. ಆಕೆ 8 ರಿಂದ 10ನೇ ತರಗತಿಯ ತನಕ ರಾಮಕೃಷ್ಣ ಶಾಲೆಗೆ ಹೋಗಿದ್ದಳು. ಅಲ್ಲಿಂದ ನಂತರ ಮಂಗಳೂರಿನಲ್ಲಿ ಸಯನ್ಸ್ ವಿದ್ಯಾರ್ಥಿನಿಯಾಗಿ, ವಿದ್ಯಾರ್ಜನೆ ಪೂರ್ಣಗೊಳಿಸಿದ್ದಾಳೆ. ಈ ನಡುವೆ ಆಕೆ ಗರ್ಭಿಣಿಯಾಗಿರುವ ವಿಚಾರವನ್ನು ಶ್ರೀಕೃಷ್ಣನೇ ನನ್ನ ಬಳಿ ಬಂದು ಆಂಟಿ ನಮ್ಮಿಂದ ತಪ್ಪಾಗಿದೆ ಎಂದು ಹೇಳಿ ವಿಷಯ ತಿಳಿಸಿದ್ದ. ಈ ವಿಚಾರವನ್ನು ಅವನ ತಂದೆಗೂ ತಿಳಿಸಿದ್ದೆ. ಆಗ ಅವರೇ ಹಾಗಾದರೆ ಮದುವೆ ಮಾಡಿಸಿ ಬಿಡುವ ಎಂದು ತಿಳಿಸಿದ್ದರು. ಹಾಗೆ ಗರ್ಭಿಣಿಯ ಪರೀಕ್ಷೆಗೆಂದು ಪಿ.ಜಿ.ಜಗನ್ನಿವಾಸ ರಾವ್, ಅವರ ಪತ್ನಿ ಹಾಗು ನಾನು ಮತ್ತು ಮಗಳು ಜೊತೆಯಲ್ಲೇ ಅಥೇನಾ ಆಸ್ಪತ್ರೆಗೆ ಹೋದಾಗ ಮಗುವನ್ನು ತೆಗೆಸುವಂತೆ ಪರೀಕ್ಷೆ ಮಾಡಿದಾಗ ಆಕೆಗೆ 7 ತಿಂಗಳಾಗಿರುವುದರಿಂದ ಕಷ್ಟ ಸಾಧ್ಯ ಎಂದಿದ್ದರು. ಮತ್ತೆ 2ನೇ ಸಲಹೆ ಪಡೆಯಲು ಶ್ರೀಕೃಷ್ಣನ ತಂದೆ ತಾಯಿ ಹಾಗು ನಾನು ನನ್ನ ಗಂಡ, ನನ್ನ ತಂಗಿ ಗಂಡ ಜೊತೆಯಾಗಿ ದೇರಳಕಟ್ಟೆ ಆಸ್ಪತ್ರೆಗೆ ಹೋದಾಗ ಸ್ಕ್ಯಾನಿಂಗ್ ಮಾಡಿದಾಗ ಏಳುವರೆ ತಿಂಗಳು ಆಗಿದೆ. ಇದು ಸಾಧ್ಯವಿಲ್ಲ ಎಂದಿದ್ದರು. ಈ ನಡುವೆ ಶ್ರೀಕೃಷ್ಣನ ತಾಯಿ ನಮ್ಮಲ್ಲಿ ನನ್ನ ಮಗನೊಂದಿಗೆ ಮದುವೆಗೆ ಕನಸಿನಲ್ಲೂ ಗ್ರಹಿಸಬೇಡಿ ಎಂದಿದರಲ್ಲದೆ ಬಂಟ್ವಾಳದ ಡಾಕ್ಟರ್‌ನ ಪರಿಚಯವಿದೆ. ಅವರು ಎಲ್ಲಾ ವ್ಯವಸ್ಥೆ ಮಾಡುತ್ತಾರೆ ಎಂದಾಗ ನನ್ನ ಮಗಳಿಗೆ ತೊಂದರೆ ಆಗುವ ಲಕ್ಷಣ ಕಂಡು ನಾನು ಹಿಂಜರಿದೆ. ಆಗ ಅವರ ಪುತ್ರ ನನಗೆ ಕರೆ ಮಾಡಿ ಆಂಟಿ ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ಹೇಳಿದ. ಅದಕ್ಕೆ ನಾನು ಫೋನ್‌ ಕಟ್ ಮಾಡಿದೆ. ಈ ಕುರಿತು ನಾನು ಪೊಲೀಸರಿಗೆ ದೂರು ನೀಡಲು ಮುಂದಾದಾಗ ನನ್ನ ಗಂಡ ಮತ್ತು ಪಿ.ಜಿ.ಜಗನ್ನಿವಾಸ ರಾವ್ ಅವರು ಒಂದೇ ಕ್ಲಾಸ್‌ಮೆಟ್ ಆಗಿದ್ದರಿಂದ ನನ್ನ ಗಂಡ ದೂರು ಕೊಡುವುದು ಬೇಡ. ಯಾರಿಗೂ ಗೊತ್ತಾಗುವುದು ಬೇಡ. ಅವರು ನನಗೆ ಪರಿಚಯ ಇದೆ. ಅವರು ಮದುವೆ ಮಾಡಿಕೊಟ್ಟಾರೂ ಎಂದಿದ್ದರು. ಆದರೆ ಪಿ.ಜಿ.ಜಗನ್ನಿವಾಸ ರಾವ್ ಅವರ ನಡವಳಿಕೆ ಸಂಶಯವಿದ್ದರಿಂದ ನಾನು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದೆ. ಆ ಸಂದರ್ಭ ಹುಡುಗನನ್ನು ಪೊಲೀಸರು ಕರೆಸಿದ್ದರು. ಆಗ ಮತ್ತೆ ಮದುವೆಯ ರಾಜಿ ಪಂಚಾತಿಕೆಗೆ ಶಾಸಕರ ಪ್ರವೇಶವಾಯಿತು ಎಂದು ಆರೋಪಿಸಿದರು.


ಠಾಣೆಯಲ್ಲಿ ಶಾಸಕರ ಕರೆ:
ನಾನು ಜೂ.22ಕ್ಕೆ ಮಹಿಳಾ ಪೊಲೀಸ್ ಸ್ಟೇಷನ್‌ನಲ್ಲಿ ದೂರು ನೀಡಲು ಹೋದಾಗ ಪಿ.ಜಿ.ಜಗನ್ನಿವಾಸ ರಾವ್ ಅವರು ಠಾಣೆಗೆ ಬಂದು ನನ್ನ ಮಗನಿಗೆ 21 ವರ್ಷ ಆದ ತಕ್ಷಣ ರಿಜಿಸ್ಟರ್ ಮದುವೆ ಮಾಡಿಸುತ್ತೇನೆ ಎಂದು ಹೇಳಿ ಬಳಿಕ ಶಾಸಕರಿಗೆ ಕರೆ ಮಾಡಿದ್ದರು. ಶಾಸಕರ ಕರೆಯನ್ನು ನನಗೆ ಕೊಟ್ಟು ಶಾಸಕರೊಂದಿಗೆ ಮಾತನಾಡಲು ತಿಳಿಸಿದರು. ಶಾಸಕರು ಪೋನ್‌ನಲ್ಲಿ ನನ್ನಲ್ಲಿ ಮಾತನಾಡಿ ಎಫ್‌ಐಆರ್ ಈಗ ಮಾಡಬೇಡಿ. ಜೂ.23ಕ್ಕೆ ಆವನಿಗೆ 21 ವರ್ಷ ಆದ ಬಳಿಕ ಅವರು ಮದುವೆ ಒಪ್ಪಿದಾರಲ್ಲ ಎಂದರು. ಹಾಗೆ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ಇತ್ಯರ್ಥ ಆಗಿತ್ತು. ಆದರೆ ಹುಡುಗನಿಗೆ 21 ವರ್ಷ ಆದ ಬಳಿಕ ಅವರು ಮದುವೆ ಒಪ್ಪದಿರುವುದನ್ನು ಶಾಸಕರಿಗೆ ಕರೆ ಮಾಡಿ ತಿಳಿಸಿದೆ. ಅದಕ್ಕೆ ಅವರು ಮದುವೆಗೆ ಒಪ್ಪದಿದ್ದರೆ ನಿಮಗೆ ಹೇಗೆ ಬೇಕೋ ಹಾಗೆ ಕೇಸ್ ಮುಂದುವರಿಸಿ ಎಂದು ಹೇಳಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದರು.

ನಮ್ಮ ಮನೆಯಲ್ಲಿ ಮಾತುಕತೆ:
ಹುಡುಗನಿಗೆ 21 ವರ್ಷ ಆದ ಬಳಿಕ ನಮ್ಮ ಮನೆಯಲ್ಲೇ ಶ್ರೀಕೃಷ್ಣ, ಅವನ ತಂದೆ ಪಿ.ಜಿ. ಜಗನ್ನಿವಾಸ ರಾವ್, ಅವರ ಅಣ್ಣ ಮತ್ತು ಲಕ್ಷ್ಮೀ ಬೆಟ್ಟದ ಅಣ್ಣತಮ್ಮಂದಿರು ಬಂದು ಮಾತುಕತೆ ನಡೆಸಿದರು. ಶ್ರೀ ಕೃಷ್ಣನ ತಂದೆಯೇ ನಮಗೆ ಹಲವು ರೀತಿಯಲ್ಲಿ ಮಗಳ ಮೇಲೆಯೇ ಸಂಶಯದ ರೀತಿಯಲ್ಲಿ ಪ್ರಶ್ನೆ ಮಾಡಿದರು. ಮಗು ನನ್ನದಲ್ಲ ಎಂದು ಹುಡುಗನೇ ಹೇಳಿ ಆಕೆಗೆ ಹಲ್ಲೆಗೂ ಯತ್ನಿಸಿದ. ಮಾತುಕತೆಗೆ ಬಂದ ಪಿ ಜಿ ಜಗನ್ನಿವಾಸ ರಾವ್ ಅವರು ನಮಗೆ ಮನೆ ಬಿಟ್ಟು ಹೋಗುವಂತೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದರು.

ಹಿಂದು ಸಂಘಟನೆಯ ಮುಖಂಡರೂ ಹಿಂಜರಿದ್ದಾರೆ:
ಹಿಂದೂ ಆಗಿ ನಮ್ಮಲ್ಲೇ ಅನ್ಯಾಯ ಆದಾಗ ನನ್ನ ಮಗಳಿಗೆ ನ್ಯಾಯಕ್ಕಾಗಿ ಹಿಂದು ಸಂಘಟನೆಯ ಮುಖಂಡರಲ್ಲೂ ಮನವಿ ಮಾಡಿದ್ದೇವೆ. ಬಜರಂಗದಳದ ಮುರಳಿಕೃಷ್ಣ ಹಸಂತಡ್ಕ ಅವರಲ್ಲಿ ಮಾತನಾಡಿದಾಗ ಅವರು ಹುಡುಗ ಒಪ್ಪುತ್ತಿಲ್ಲ ಎಂದು ಹೇಳಿದರಲ್ಲೆ 10ಲಕ್ಷ ಕೊಟ್ಟರೆ ಆಗಬಹುದಾ ಎಂದು ಕೇಳಿದ್ದಾರೆ. ನಾನು 10 ಲಕ್ಷವಲ್ಲ 1 ಕೋಟಿ ಕೊಟ್ಟರು ನಾನು ನ್ಯಾಯ ಸಿಗದೆ ಬಿಡುವುದಿಲ್ಲ ಎಂದು ಹೇಳಿದ್ದೆ. ಮಂಗಳೂರಿನಲ್ಲೂ ಶರಣ್‌ಪಂಪ್‌ವೆಲ್ ಅವರಲ್ಲಿ ಪೋನ್‌ನಲ್ಲಿ ಕರೆ ಮಾಡಿ ಮನವಿ ಮಾಡಿದ್ದೆವು. ಅವರು ಮಗುವನ್ನು ಡೊನೆಟ್ ಮಾಡಬಹುದಾ ಎಂದು ಕೇಳಿದ್ದರು. ಅರುಣ್ ಕುಮಾರ್ ಪುತ್ತಿಲರಲ್ಲೂ ಮಾತನಾಡಿದಾಗ ಇದರಲ್ಲಿ ನಾನು ಬಂದ್ರೆ ತಪ್ಪಾಗುತ್ತದೆ ಎಂದು ಹೇಳಿ ಕೈಚೆಲ್ಲಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ.


ಮನೆಯವರೇ ಅವನನ್ನು ಮುಚ್ಟಿಟ್ಟಿದ್ದಾರೆ:
ನನ್ನ ಮಗಳನ್ನು ಮದುವೆ ಆಗಲು ಒಪ್ಪದ ಶ್ರೀಕೃಷ್ಣನ ವಿರುದ್ಧ ನಾವು ಜೂ.24ರಂದು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದೇವೆ. ಆದರೆ ಪೊಲೀಸರು ಅವರನ್ನು ವಿಚಾರಣೆ ಕರೆದಿಲ್ಲ. ಪೊಲೀಸರನ್ನು ಈ ಕುರಿತು ಪ್ರಶ್ನಿಸಿದರೆ ಶ್ರೀಕೃಷ್ಣ ನಾಪತ್ತೆಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ತಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ. ಶ್ರೀಕೃಷ್ಣ ಓಡಿ ಹೊದದಲ್ಲ ಮನೆಯವರೇ ಅವನನ್ನು ಮುಚ್ಚಿಟ್ಟಿದ್ದಾರೆ. ಪೊಲೀಸರು ಪ್ರಯತ್ನ ಪಟ್ಟರೆ ಆತನನ್ನು ಪತ್ತೆ ಮಾಡುವುದು ಕಷ್ಟವಿಲ್ಲ. ಈ ಕುರಿತು ಎಸ್ಪಿಯವರಲ್ಲೂ ಹೋಗಿ ತಿಳಿಸಿದ್ದೇವೆ. ಅವರು ಯುವಕನ ಕ್ಲೂ ಸಿಕ್ಕಿದೆ ಎಂದು ಹೇಳುತ್ತಾರೆ ಹೊರತು ಇಲ್ಲಿನ ತನಕ ಪತ್ತೆ ಮಾಡಿಲ್ಲ ಎಂದು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ.


ಡಿಎನ್‌ಎ ಪರೀಕ್ಷೆಗೆ ನಾವು ಸಿದ್ಧ
ಮಗುವಿನ ಡಿ.ಎನ್.ಎ ಪರೀಕ್ಷೆಗೂ ನಾವು ಸಿದ್ದರಿದ್ದೇವೆ. ಮಗುವಿಗೆ ಮೂರು ತಿಂಗಳಾದ ಬಳಿಕ ಡಿ.ಎನ್.ಎ ಪರೀಕ್ಷೆ ಮಾಡುವಂತೆ ತಿಳಿಸಿದ್ದಾರೆ.
ಸಂತ್ರಸ್ತೆಯ ತಾಯಿ


ಶಾಸಕರ ಸ್ಪಷ್ಟನೆ :
ಕಳೆದ ಕೆಲವು ದಿನಗಳ ಹಿಂದೆ ನನಗೆ ಪಿ ಜಿ ಜಗನ್ನಿವಾಸ್ ರಾವ್ ಕರೆ ಮಾಡಿ ಅವರ ಮಗನ ವಿಷಯವನ್ನು ನನ್ನ ಬಳಿ ಹೇಳಿದ್ದರು. ಹೀಗೀಗೆ ಘಟನೆ ನಡೆದಿದೆ. ನಾವು ಠಾಣೆಯಲ್ಲಿದ್ದೇವೆ. ಯುವತಿ ತಾಯಿಯೂ ನಮ್ಮ ಜೊತೆಯೇ ಇದ್ದಾರೆ. ಘಟನೆ ನಡೆದು ಹೋಗಿದೆ ನನ್ನ ಮಗ ಆಕೆಯನ್ನುಮದುವೆಯಾಗುವುದಾಗಿ ಒಪ್ಪಿದ್ದಾನೆ ,ಈಗ ಅವನಿಗೆ ೨೧ ವರ್ಷ ಪೂರ್ತಿಯಾಗದ ಕಾರಣ ಎರಡು ತಿಂಗಳು ಬಿಟ್ಟು ಆಕೆಯನ್ನು ಮದುವೆಯಾಗುತ್ತಾನೆ ಎಂದು ಹೇಳಿದ್ದರು. ಆ ಬಳಿಕ ಯುವತಿಯ ತಾಯಿ ಕರೆ ಮಾಡಿ ಇದೇ ವಿಚಾರವನ್ನು ಹೇಳಿ ಜಗನ್ನಿವಾಸ್ ರಾವ್ ಮಗ ನನ್ನ ಮಗಳನ್ನು ಮದುವೆಯಾಗುವುದಾಗಿ ಹೇಳಿದ್ದಾರೆ ,೨೧ ವರ್ಷ ಪ್ರಾಯ ಪೂರ್ತಿಯಾಗಿಲ್ಲ ಆದ ಕೂಡಲೇ ಮದುವೆಯಾಗುತ್ತಾರೆ ಎಂದು ನನ್ನಲ್ಲಿ ಹೇಳಿದ್ದರು. ಆಗ ನಾನು ಅವರಲ್ಲಿ ” ಮದುವೆಯಾಗುವುದಾಗಿ ಒಪ್ಪಿಕೊಂಡಲ್ಲಿ ಕೇಸು ಯಾಕೆ? ನಿಮ್ಮೊಳಗೆ ರಾಜಿ ಮಾತುಕತೆ ನಡೆಸಿದ್ದೀರಲ್ಲ ಮದುವೆಯಾಗುವುದಾದರೆ ಸಮಸ್ಯೆ ಇತ್ಯರ್ಥವಾಯಿತಲ್ಲ ಎಂದು ಹೇಳಿದಾಗ ಮಹಿಳೆ ಹೌದು ಎಂದು ಹೇಳಿದ್ದರು. ಆ ನಂತರ ಕೆಲವು ವಾರಗಳ ಬಳಿಕ ಇತ್ಗೀಚೆಗೆ ಮಹಿಳೆ ಕರೆ ಮಾಡಿ ಅವನು ಮದುವೆಯಾಗುದಿಲ್ವಂತೆ ಏನು ಮಾಡುವುದು ಎಂದು ಹೇಳಿದ್ದರು. ಮದುವೆಯಾಗದೇ ಇದ್ದಲ್ಲಿ ಕಾನೂನು ಪ್ರಕಾರ ಪ್ರಕ್ರಿಯೆ ನಡೆಯಲಿ ಎಂದು ಹೇಳಿದ್ದೆ ವಿನಾ ನಾನು ಬೇರೇನು ಹೇಳಿಲ್ಲ. ನಾನು ಯಾವುದೇ ಅನ್ಯಾಯ ಯಾರಿಗೂ ಮಾಡಿಲ್ಲ, ಅನ್ಯಾಯ ಮಾಡಿ ನಾನು ಗಳಿಸುವಂತದ್ದೇನಿಲ್ಲ. ಈಗ ಪ್ರಕರಣ ದಾಖಲಾಗಿದೆ,ಮುಂದೆ ಕಾನೂನು ಪ್ರಕಾರವೇ ನಡೆಯಲಿದೆ.
ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here