ಎಸ್.ಪಿ.ವೈ.ಎಸ್.ಎಸ್ ಸಹಸ್ರಲಿಂಗೇಶ್ವರ ಶಾಖೆಯ ಮಾತೃಧ್ಯಾನ, ಮಾತೃವಂದನಾ, ಮಾತೃಪೂಜನ ಕಾರ್ಯಕ್ರಮ

0

ಆಲಂಕಾರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮಂಗಳೂರು ಮಹಾನಗರ, ಉಪ್ಪಿನಂಗಡಿ ತಾಲೂಕು, ಸಹಸ್ರಲಿಂಗೇಶ್ವರ ಶಾಖೆ, ಉಪ್ಪಿನಂಗಡಿ ಇದರ ಎರಡನೇ ವರ್ಗದ ಮಾತೃ ಧ್ಯಾನ, ಮಾತೃ ವಂದನ, ಮಾತೃ ಪೂಜನ ಹಾಗೂ ಮಾತೃ ಭೋಜನ ಉಪ್ಪಿನಂಗಡಿ ಸಂಗಮ ಕೃಪಾ ಸಭಾ ಭವನ, ಸಿ ಎ ಬ್ಯಾಂಕ್ ಉಪ್ಪಿನಂಗಡಿಯಲ್ಲಿ ನಡೆಯಿತು.

ಭಜನೆಯಿಂದ ಕಾರ್ಯಕ್ರಮ ಪ್ರಾರಂಭವಾಗಿ ಯೋಗ ಹಾಗೂ ಯೋಗೇತರ ಬಂಧುಗಳಿಗೆ ಆಟೋಟಗಳನ್ನು ಯೋಗ ಶಿಕ್ಷಕಿಯರಾದ ಆಶಾ ಆಚಾರ್ಯ, ಆಶಾ ಭಟ್, ಶಶಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಉಪ್ಪಿನಂಗಡಿ ನಗರ ಪ್ರಶಿಕ್ಷಣ ಪ್ರಮುಖರಾದ ಯಶೋಧರ, ನಗರ ಶಿಕ್ಷಣ ಸಹಪ್ರಮುಖರಾದ ಕೃಷ್ಣಪ್ಪ ರವರು ನಿರ್ವಹಿಸಿದರು. ನಗುವೇ ಯೋಗ ಅವಧಿಯನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಉಪ್ಪಿನಂಗಡಿ ನಗರ ಶಿಕ್ಷಣ ಪ್ರಮುಖರಾದ ಪ್ರದೀಪ್ ರವರು ನೆರವೆರಿಸಿದರು. ಸಭಾ ಕಾರ್ಯಕ್ರಮ ನಡೆಯಿತು.


ಉಪ್ಪಿನಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ಸುನೀಲ್ ದಡ್ಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ವಿಶ್ವಕ್ಕೆ ಯೋಗವನ್ನು ಪರಿಚಯಿಸಿ ಕೊಟ್ಟ ದೇಶ ಭಾರತ.ಇಂದು ವಿಶ್ವದ ಎಲ್ಲಾ ಭಾಗಗಳಲ್ಲಿ ಯೋಗಭ್ಯಾಸದಲ್ಲಿ ಜೋಡಿಸಿಕೊಳ್ಳುತ್ತಿರುವುದು ಬಹಳ ಸಂತಸದ ವಿಚಾರವಾಗಿದ್ದು, ಯೋಗ ನಮ್ಮ ದೈನಂದಿನ ಚಟುವಟಿಕೆಯಲ್ಲಿ ಒಂದಾಗಬೇಕೆಂದರು. ಎಸ್.ಪಿ.ವೈ.ಎಸ್.ಎಸ್ ಪೊಳಲಿ ಶಾಖೆಯ ಹಿರಿಯ ಶಿಕ್ಷಕಿ ವಿಶಾಲಾಕ್ಷಿ ಯವರು ಮಾತನಾಡಿ ಹೆಣ್ಣಿಗೆ ಒಳ್ಳೆಯ ಸಂಸ್ಕಾರ,ಸಂಸ್ಕೃತಿ ಕೊಟ್ಟಾಗ ಇನ್ನೊಂದು ಮನೆಯನ್ನು ಬೆಳಗುತ್ತಲೇ, ನಾವು ಮುಂದಿನ‌ ಜನ್ಮದಲ್ಲಿ ಇಂತವರ ಮಕ್ಕಳಾಗಿ ಹುಟ್ಟಬೇಕೆಂದು ಅರ್ಜಿ ಹಾಕಿದರು ಹುಟ್ಟಲು ಸಾಧ್ಯವಿಲ್ಲ. ಭಗವಂತನ ಸೃಷ್ಟಿಯಲ್ಲಿ ನಮಗೆ ತಂದೆ ತಾಯಿಯೇ ದೇವರು ಎಂದು ತಿಳಿಸಿ ಮಾತೃವಂದನ,ಮಾತೃಪೂಜಾನ ,ಮಾತೃಭೋಜನದ ಮಹತ್ವ ತಿಳಿಸಿದರು.


ವೈಯಕ್ತಿಕ ಪ್ರಾರ್ಥನೆಯನ್ನು ಯೋಗಬಂಧುಗಳಾದ ಪೂರ್ವಿ ಹಾಗೂ ಆದ್ಯ ನಡೆಸಿ, ಯೋಗಬಂಧು ಶ್ವೇತ ಸ್ವಾಗತಿಸಿ, ಶಾಖಾ ವರದಿಯನ್ನು ಹೇಮಲತಾ ವಾಚಿಸಿದರು. ಶಾಖೆಯ ಹೊಸವರ್ಗದ ಯೋಗಬಂಧುಗಳು ಶಿಬಿರದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಮಲತಾ, ಸಂಚಾಲಕರು, ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ, ನಮ್ಮ ಮನೆ ಶಾಖೆ, ಗುರುವಾಯನಕೆರೆ ವಹಿಸಿ ತಾಯಿಯ ಮಹತ್ವವನ್ನು ಚೊಕ್ಕದಾಗಿ ಬಣ್ಣಿಸಿದರು. ಯೋಗಬಂಧುವಾದ ಅಕ್ಷಯ ವಂದಿಸಿ, ಡಾ| ಶೃತಿ ಪಾರ್ವತಿ ಕೈಲಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ
ಉರಿಸಿದ ಹಣತೆಗಳ ಬೆಳಕಿನಲ್ಲಿ ಯೋಗ ಮತ್ತು ಯೋಗೇತರ ಬಂಧುಗಳಿಗೆ ಮನಮುಟ್ಟುವ ವಿಶ್ಲೇಷಣೆ ಸಹಿತ ಮಾತೃ ಧ್ಯಾನವನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಮಕ್ಕಳ ಶಿಕ್ಷಣ ಪ್ರಮುಖರಾದ ಪ್ರಸಾದ್ ರವರು ನಡೆಸಿಕೊಟ್ಟರು.


ಕಾರ್ಯಕ್ರಮದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರದ ಸಂಚಾಲಕರಾದ ಆನಂದ ಕುಂಟಿನಿ ಮಾರ್ಗದರ್ಶನ ನೀಡಿ, ತಾಲ್ಲೂಕು ಸಂಚಾಲಕರಾದ ಸಂತೋಷ್ ಕುಮಾರ್, ತಾಲ್ಲೂಕು ವರದಿ ಪ್ರಮುಖ ಮುರಳಿ ಮೋಹನ್,ಶಿಕ್ಷಕರಾದ ಗೋವಿಂದ ಪ್ರಸಾದ್ ಕಜೆ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಗುರುವಾಯನಕೆರೆ, ನೆಲ್ಯಾಡಿ, ಆಲಂಕಾರು, ಕೊಯಿಲ, ಉಪ್ಪಿನಂಗಡಿ ಹಾಗೂ ಮಂಗಳೂರಿನ ಹಿರಿಯ ಯೋಗಬಂಧುಗಳು ಸೇರಿದಂತೆ 160ಕ್ಕಿಂತಲೂ ಅಧಿಕ ಯೋಗ ಹಾಗೂ ಯೋಗೇತರ ಬಂಧುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here