ಪುತ್ತೂರು:ಯುವತಿಗೆ ವಂಚನೆ ಪ್ರಕರಣದ ಸಂತ್ರಸ್ತೆಯ ಮನೆಗೆ ಪುತ್ತೂರು ಬಿಜೆಪಿ ಮಂಡಲದ ಮಹಿಳಾ ಪದಾಧಿಕಾರಿಗಳು ತೆರಳಿ, ನಾವು ನಿಮ್ಮ ಜೊತೆ ಇದ್ದೇವೆ ಎಂದು ಧೈರ್ಯ ತುಂಬಿದ್ದಾರೆ.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ನಗರಸಭೆ ಸದಸ್ಯರಾದ ದೀಕ್ಷಾ ಪೈ, ಇಂದಿರಾ ಆಚಾರ್ಯ, ಪ್ರೇಮಲತಾ ನಂದಿಲ, ಒಬಿಸಿ ಮೋರ್ಚಾ ಜಿಲ್ಲಾ ಸದಸ್ಯೆ ಪ್ರಭಾ ಆಚಾರ್ಯ, ಗ್ರಾಮಾಂತರ ಮಂಡಲದ ಉಪಾಧ್ಯಕ್ಷೆ ದಿವ್ಯಾಪುರುಷೋತ್ತಮ್, ನಗರ ಮಹಿಳಾ ಮೊರ್ಚಾದ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮೀ ಶಗ್ರಿತ್ತಾಯ ಮತ್ತು ಬಿಜೆಪಿ ಮಂಡಲದ ಪ್ರಮುಖರು ಉಪಸ್ಥಿತರಿದ್ದರು.