ಮದುವೆ ಮಾಡಿಸಿ ಅಷ್ಟೇ ಕೇಳೋದು – ಅಳಲು ತೋಡಿಕೊಂಡ ಸಂತ್ರಸ್ತೆಯ ತಾಯಿ
ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಸಂತ್ರಸ್ತೆ ಯುವತಿ ಮನೆಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಸಂತ್ರಸ್ತ ಯುವತಿಯ ತಾಯಿಯೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಸಂತ್ರಸ್ತೆ ತಾಯಿ ಶಾಸಕರ ಬಳಿ ‘ಮದುವೆ ಮಾಡಿಸಿ ಶಿಕ್ಷೆ ಬೇಡ. ಅವನಿಗೆ ಶಿಕ್ಷೆ ಕೊಡಬೇಡಿ.ಮಗಳ ಜೊತೆ ಮದುವೆ ಮಾಡಿಸಿ. ಶಿಕ್ಷೆ ಕೊಡಿಸೋದಿಕ್ಕಾಗಿ ನಾನು ಹೋರಾಡೋದಲ್ಲ. ಮದುವೆ ಮಾಡಿಸಲಿಕ್ಕೊಸ್ಕರ ಹೋರಾಡ್ತಾ ಇರೋದು ಎಂದು ಶಾಸಕರ ಬಳಿ ಅಳಲು ತೋಡಿಕೊಂಡರು.