
ಬೆಟ್ಟಂಪಾಡಿ: ಇರ್ದೆ ಬೆಟ್ಟಂಪಾಡಿ ಬಿಜೆಪಿ ಶಕ್ತಿ ಕೇಂದ್ರ ಬೂತ್ ಸಂಖ್ಯೆ 170, 169,166,167,168ರಲ್ಲಿ ಗುರುವಂದನಾ ಕಾರ್ಯಕ್ರಮ ಜು.10ರಂದು ನಡೆಸಲಾಯಿತು.

ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ನಾರಾಯಣ ಭಟ್ ಕೋನಡ್ಕ, ನಿವೃತ್ತ ಚಿತ್ರಕಲಾ ಶಿಕ್ಷಕ ಐ. ಗೋಪಾಲಕೃಷ್ಣ ರಾವ್, ನಿವೃತ್ತ ಶಿಕ್ಷಕರಾದ ದೇವಪ್ಪ ನಾಯ್ಕ್, ಶಂಕರನಾರಾಯಣ ಭಟ್ ಕಂಚಿಮೂಲೆ, ಪೇರಲ್ತಡ್ಕ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕ ರವರುಗಳಿಗೆ ಅವರವರ ಮನೆಯಲ್ಲಿ ಭೇಟಿಯಾಗಿ ಗೌರವಾರ್ಪಣೆ ಸಲ್ಲಿಸಲಾಯಿತು.

ಈ ಕಾರ್ಯಕ್ರಮ ದಲ್ಲಿ ಬೆಟ್ಟಂಪಾಡಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಸಂದೀಪ್ ರೈ ಬೆಟ್ಟಂಪಾಡಿ, ಇರ್ದೆ ಶಕ್ತಿ ಕೇಂದ್ರ ಅಧ್ಯಕ್ಷ ಪುರಂದರ ದೂಮಡ್ಕ, ರೆಂಜ ಸಮಾಜ ಮಂದಿರ ಬೂತ್ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಬೈರಮಜಲು, ಪುತ್ತೂರು ಗ್ರಾಮಾಂತರ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸುಜಿತ್ ಕಜೆ, ಬೆಟ್ಟಂಪಾಡಿ ಪಂಚಾಯತ್ ಸದಸ್ಯ ಪ್ರಕಾಶ್ ರೈ ಬೈಲಾಡಿ, ಬೆಟ್ಟಂಪಾಡಿ ಬೂತ್ ಕಾರ್ಯದರ್ಶಿ ಉಚಿತ್ ಕುಮಾರ್ ಬೆಟ್ಟಂಪಾಡಿ ಬಿಜೆಪಿ ಕಾರ್ಯಕರ್ತ ಅಶ್ಮಿತ್ ಕಕ್ಕೂರು, ಪುರಂದರ ಕುಲಾಲ್ ಕಕ್ಕೂರು, ಮಿತ್ತಡ್ಕ ಬೂತ್ ಅಧ್ಯಕ್ಷ ಶಾಂತರಾಮ ಗೌಡ ಮಿತ್ತಡ್ಕ, ಬೆಟ್ಟಂಪಾಡಿ ಬೂತ್ ಅಧ್ಯಕ್ಷ ಮನೋಜ್ ಕುಮಾರ್ ರೈ ಉಪಸ್ಥಿತರಿದ್ದರು.

