ಪುತ್ತೂರು: ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್ನಲ್ಲಿ ಜುಲೈ 9 ರಿಂದ 13ರವರೆಗೆ ಕರ್ನಾಟಕ ಈಜು ಸಂಸ್ಥೆ ನಡೆಸಿದ ಕರ್ನಾಟಕ ರಾಜ್ಯ ಈಜು ಚಾಂಪಿಯನ್ಶಿಪ್ನಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್ನ ಲಾಸ್ಯ ಕಿಶನ್ ಕಂಚಿನ ಪದಕ ಗೆದ್ದಿದ್ದಾರೆ.
ಅವರು 14 ವರ್ಷದ ಬಾಲಕಿಯರ 50 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ ಸ್ಪರ್ಧಿಸಿ ಕಂಚಿನ ಪದಕ ಪಡೆದಿದ್ದಾರೆ. ನೆಹರುನಗರ ವಿವೇಕಾನಂದ ಸಿಬಿಎಸ್ಇ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಇವರು ಸುಳ್ಯ ಗುತ್ತಿಗಾರು ನಿವಾಸಿ ಕಿಶನ್ ದೇರಪ್ಪಜ್ಜನಮನೆ ಮತ್ತು ದೀನಾ ಕಿಶನ್ ದಂಪತಿ ಪುತ್ರಿಯಾಗಿದ್ದಾರೆ. ಇವರು ಬಾಲವನ ಈಜು ಕೊಳದಲ್ಲಿ ಕೋಚ್ ಪಾರ್ಥ ವಾರಣಾಸಿಯವರಿಂದ ತರಬೇತಿ ಪಡೆಯುತ್ತಿದ್ದಾರೆ.