ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ವಿಟ್ಲ ಇದರ ಆಲಂಗಾರು ಒಕ್ಕೂಟದ ವಾರ್ಷಿಕೋತ್ಸವವು ಚಂದಳಿಕೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ದ.ಕ -2 ಜಿಲ್ಲೆಯ ನಿರ್ದೇಶಕರಾದ ಬಾಬು ನಾಯ್ಕ್ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘವು ಬೆಳೆದು ಬಂದ ದಾರಿ ಸಂಘದಲ್ಲಿ ಉತ್ತಮವಾಗಿ ಗ್ರೇಡ್ ಬರಬೇಕೆಂದರೆ ಏನು ಮಾಡಬೇಕು, ಯೋಜನೆಯಲ್ಲಿ 46೦೦೦ ಕಾರ್ಯಕರ್ತರಿದ್ದು ಬೇರೆ ಯಾವುದೇ ಸಂಸ್ಥೆಯಲ್ಲಿ ಇಷ್ಟು ಕಾರ್ಯಕರ್ತರಿಲ್ಲ, ಸಂಘವು ಜನರಿಗೆ ಸ್ವಾವಲಂಬನೆಯಾಗಿ ಬದುಕಲು ದಾರಿ ಮಾಡಿಕೊಟ್ಟಿದೆ ಎಂದು ತಿಳಿಸಿದ ಅವರು ಸಂಘಕ್ಕೆ ವಿಧಿಸುವ ಬಡ್ಡಿದರ, ಮಾಸಾಶನ, ಸುಜ್ಞಾ ನಿಧಿಶಿಷ್ಯವೇತನ ಇದರ ಬಗ್ಗೆ ತಿಳಿಸಿದರು.
ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಮಾಡತರ್ ಇವರು ಪಂಚಾಯತ್ ವ್ಯಾಪ್ತಿಯಲ್ಲಿ ಬರುವಂತಹ ಸೌಲಭ್ಯಗಳ ಬಗ್ಗೆ ತಿಳಿಸಿದರು. 10ನೇ ತರಗತಿಯಲ್ಲಿ ಅತಿ ಹೆಚ್ಚು 612 ಅಂಕ ಗಳಿಸಿದ ಶ್ರುತಿ ಹಾಗು ದ್ವಿತೀಯ ಪಿಯುಸಿನಲ್ಲಿ ಅತಿಹೆಚ್ಚು ಅಂಕ ಗಳಿಸಿದ ದೀಕ್ಷಾ ಇವರನ್ನು ಗೌರವಿಸಲಾಯಿತು. ಅತ್ಯುತ್ತಮ ಪ್ರಗತಿ ಬಂದು ಮತ್ತು ಸ್ವಸಹಾಯ ಸಂಘಗಳನ್ನು ಗುರುತಿಸಲಾಯಿತು. ನಿವೃತ್ತ ಸೈನಿಕರಾದ ಪುರಂದರ ದರ್ಬೆ,ಅಳಿಕೆ ವಲಯದ ವಲಯದ್ಯಕ್ಷರಾದ ರಾಜೇಂದ್ರ ರೈ, ವಲಯದ ಮೇಲ್ವಿಚಾರಕರು, ಒಕ್ಕೂಟದ ಅಧ್ಯಕ್ಷರಾದ ಸುಜಾತಾ, ಪದಾಧಿಕಾರಿಗಳು, ಸರ್ವ ಸದಸ್ಯರು, ಶೌರ್ಯ ವಿಪತ್ತು ಅಳಿಕೆ ಘಟಕದ ಸದಸ್ಯರು ಉಪಸ್ಥಿತರಿದ್ದರು.


ವಾರ್ಷಿಕೋತ್ಸವದ ಅಂಗವಾಗಿ ಶಿಬರಿ ಕುಣಿತ ಭಜನಾ ತಂಡ ಮಾಡತ್ತಡ್ಕ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಅಜ್ಜಿನಡ್ಕ ಇವರಿಂದ ಕುಣಿತ ಭಜನೆ ನಡೆಯಿತು. ಕಾರ್ಯದರ್ಶಿ ವಿಶಾಲಾಕ್ಷಿ ವರದಿ ಮಂಡಿಸಿದರು.ಸುಮತಿ ಸ್ವಾಗತಿಸಿ ಸೇವಾ ಪ್ರತಿನಿಧಿ ರೂಪ ವಂದಿಸಿದರು. ಜಯಶ್ರಿ ಕಾರ್ಯಕ್ರಮ ನಿರೂಪಿಸಿದರು. ಅಜ್ಜಿನಡ್ಕ ಸೇವಾ ಪ್ರತಿನಿಧಿ ಕಾವ್ಯ ಹಾಗೂ ಸರಸ್ವತಿಯವರು ಸಹಕರಿಸಿದರು.