ಪುತ್ತೂರು: ನೆಟ್ಟಾರು ದಿ. ಹನುಮ ಶೆಟ್ಟಿಯವರ ಪತ್ನಿ ಪದ್ಮಾವತಿ ನೆಟ್ಟಾರು (98ವ) ಜು.17ರಂದು ಪುತ್ರ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಮೊಗಪ್ಪೆ ಸೀತಾರಾಮ ಶೆಟ್ಟಿಯವರ ಮನೆಯಲ್ಲಿ ನಿಧನರಾದರು.
ಮೃತರು ಪುತ್ರರಾದ ನಿವೃತ್ತ ವಿಜಯಾ ಬ್ಯಾಂಕ್ ಪ್ರಬಂಧಕ ಬಾಲಕೃಷ್ಣ ಶೆಟ್ಟಿ, ಸುಳ್ಯದಲ್ಲಿ ಸೀಮಾ ಆರ್ಟ್ಸ್ ನಡೆಸುತ್ತಿದ್ದ ಸೀತಾರಾಮ ಶೆಟ್ಟಿ, ನಿವೃತ್ತ ಅಂಚೆ ಮೇಲ್ವಿಚಾರಕರಾದ ದೇವದಾಸ ಶೆಟ್ಟಿ, ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಮೋಹನ್ ದಾಸ್ ಶೆಟ್ಟಿ, ಪುತ್ರಿಯರಾದ ಸರೋಜಿನಿ ಮೂಡಿಗೆರೆ, ನಾಗವೇಣಿ ಬೆಂಗಳೂರು ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.