ಉಪ್ಪಿನಂಗಡಿ: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಜೇಸಿಐ ವಲಯ 15ರ ವ್ಯವಹಾರ ಸಮ್ಮೇಳನ ‘ಸಾಧಕ ಜೇಸಿಗಳ ತರಂಗ’- ಮೃದಂಗ 2025ರಲ್ಲಿ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಜೇಸಿಐ ಉಪ್ಪಿನಂಗಡಿ ಘಟಕದ 2023ನೇ ಸಾಲಿನ ಘಟಕಾಧ್ಯಕ್ಷ ಜೇಸಿ ಶೇಖರ್ ಗೌಂಡತ್ತಿಗೆ ಅವರಿಗೆ ವೃತ್ತಿ ಮತ್ತು ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ‘ಜೇಸಿಐ ಸಾಧನಾ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಮಡಂತ್ಯಾರು ಇದರ ಆತಿಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಜೇಸಿ ಸೆನೆಟರ್ ಅಭಿಲಾಷ್ ಬಿ.ಎ. ಮತ್ತು ಜೇಸಿ ವಲಯ ನಿರ್ದೇಶಕ ಆಶೋಕ್ ಗುಂಡ್ಯಲಿಕೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭ ಶೇಖರ ಗೌಂಡತ್ತಿಗೆ ಅವರ ಪತ್ನಿ ಮಮತಾ, ಪುತ್ರಿ ಬೇಬಿ ಸ್ತತಿ ಇದ್ದರು. ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ಸುಹಾಸ್ ಮರಿಕೆ, ವಲಯ ಸಂಯೋಜಕ ವಿನೀತ್ ಶಗ್ರಿತ್ತಾಯ, ವಲಯ ಉದಕ ಪತ್ರಿಕೆಯ ಸಂಪಾದಕ ಮೋಹನ್ ಚಂದ್ರ ತೋಟದ ಮನೆ, ಉಪ್ಪಿನಂಗಡಿ ಘಟಕದ ಕಾರ್ಯದರ್ಶಿ ಮಹೇಶ್ ಖಂಡಿಗ, ಸದಸ್ಯ ದಿವಾಕರ್ ಶಾಂತಿನಗರ ಉಪಸ್ಥಿತರಿದ್ದರು.