ಹೆಸರಾಂತ ಸ್ವರ್ಣೋದ್ಯಮಿ ಜಿ.ಎಲ್. ಬಲರಾಮ ಆಚಾರ್ಯ ರವರಿಂದ ಮಳಿಗೆ ಉದ್ಘಾಟನೆ…
3 ಎಸ್ ಸೇವೆಯನ್ನೊಳಗೊಂಡಿರುವ (ಸೇಲ್ಸ್, ಸರ್ವೀಸ, ಸ್ಪೇರ್ಸ್) ವಿನೂತನ ಮಳಿಗೆ….
2 ಸಾವಿರ ಚದರ ಅಡಿ ವಿಸ್ತಾರವಿರುವ ಮಳಿಗೆ ಹಾಗೂ 4 ಸಾವಿರ ಚದರ ಅಡಿ ಸರ್ವಿಸ್ ಏರಿಯದಲ್ಲಿ ಫೋರ್ ಬೇ (4 ಬೇ) ಹೊಂದಿದೆ…
ಪುತ್ತೂರು: ವಿಶಿಷ್ಟ ವಿನ್ಯಾಸ , ಸುಧಾರಿತ ತಂತ್ರಜ್ಞಾನದೊಡನೆ ಬಲು ಪ್ರಸಿದ್ಧಿ ಪಡೆದಿರುವಂತಹ ದಕ್ಷಿಣ ಕೊರಿಯಾದ ಕಿಯಾ ಕಾರುಗಳ ಎರಡನೆಯ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಿಯಾ ಮೋಟಾರ್ಸ್ ಇದರ ಡೀಲರ್ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಎ.ಆರ್.ಎಂ ಕಿಯಾ ಇದರ ಶಾಖೆ ಆ.22ರಂದು ಇಲ್ಲಿನ ಮುಕ್ರಂಪಾಡಿಯಲ್ಲಿ ಶುಭಾರಂಭಗೊಂಡಿತು.

ನೂತನ ಶಾಖೆಯ ಉದ್ಘಾಟನೆಯನ್ನು ಸ್ವರ್ಣೋದ್ಯಮಿ , ಜಿ.ಎಲ್ .ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ದೀಪ ಪ್ರಜ್ವಲನೆ ಮೂಲಕ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕಿಯಾ ಮಳಿಗೆ ಪುತ್ತೂರಿನಲ್ಲಿ ಪ್ರಾರಂಭಗೊಂಡಿರುವುದು ಅತೀವ ಸಂತಸದ ವಿಚಾರವಾಗಿದ್ದು, ಜಗತ್ತಿನ ಆಟೋಮೊಬೈಲ್ ಕ್ಷೇತ್ರವನ್ನು ನೋಡಿದಾಗ, ಭಾರತವು ಜಗತ್ತಿನ ಅತಿದೊಡ್ಡ ವಲಯಗಳಲ್ಲಿ ಒಂದಾಗಿದ್ದು, ಆರ್ಥಿಕತೆಗೆ ಗಣನೀಯ ಕೊಡುಗೆಯನ್ನು ನೀಡಿದೆ. ಉದ್ಯಮ ಕ್ಷೇತ್ರದಲ್ಲಿ ಆರೂರು ಕುಟುಂಬ ಸುಮಾರು ಐದು ತಲೆಮಾರುಗಳಿಂದ ಸೇವೆಯಲ್ಲಿದೆ.
ಸಂಸ್ಥೆಯೊಂದು ತೃಪ್ತಿಕರ ಸೇವೆಯನ್ನು ಗ್ರಾಹಕ ವರ್ಗಕ್ಕೆ ಕೊಡುವುದು ಕೂಡ ತುಂಬಾನೇ ಚಾಲೆಂಜಿಂಗ್ ಕಾರ್ಯವೆಂದು ಹೇಳಬಹುದಾದರೂ, ಇವನ್ನೆಲ್ಲಾ ಆರೂರು ಕುಟುಂಬ ಅತ್ಯಂತ ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದು, ನೂತನ ಸಂಸ್ಥೆಗೆ ಉತ್ತಮ ರೀತಿಯ ಸಹಕಾರ ಸಿಗಲಿಯೆಂದು ಹೇಳಿ ಹಾರೈಸಿದರು. ಮಳಿಗೆಗೆ ಜಾಗ ಒದಗಿಸಿದ್ದ ಎಂ.ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಮುರಳೀಧರ ಶೆಟ್ಟಿ ಕೂಡ ಹಾರೈಸಿದರು.
ಸಂಸ್ಥೆಯ ನಿರ್ದೇಶಕರಾದ ಆರೂರ್ ವರುಣ್ ರಾವ್ ಮತ್ತು ಆರೂರ್ ವಿಕ್ರಂ ರಾವ್ ಸಂಸ್ಥೆ ಕಾರ್ಯವೈಖರಿ ಬಗ್ಗೆ ವಿವರಣೆ ನೀಡಿದರು. ವೇದಿಕೆಯಲ್ಲಿ ಕಿಯಾ ಏರಿಯಾ ಫೀಲ್ಡ್ ಸರ್ವೀಸ್ ಮ್ಯಾನೇಜರ್ ಅರುಣ್ ಕಾಪ್ಸೆ ಹಾಗೂ ಆಡಳಿತ ನಿರ್ದೇಶಕರಾದ ಆರೂರ್ ಗಣೇಶ್ ರಾವ್ ಹಾಜರಿದ್ದರು.
ಎಲ್ಲಾ ಅತಿಥಿಗಳನ್ನು ಆರೂರ್ ಕುಟುಂಬ ಸದಸ್ಯರು ಸ್ವಾಗತಿಸಿದರು. ಈ ವೇಳೆ ಎಂ ಸಂಜೀವ ಶೆಟ್ಟಿ ಮಳಿಗೆಯ ಗಿರಿಧರ್ ಶೆಟ್ಟಿ ಹಾಗೂ ಮನೋಹರ್ ಶೆಟ್ಟಿ ಕುಟುಂಬ , ಜಿ.ಎಲ್ ಸುಧನ್ವ ಆಚಾರ್ಯ ಸಹೋದರರು, ಎ.ಆರ್.ಎಂ ಕಿಯಾ ಉಪಾಧ್ಯಕ್ಷ ಪ್ರದೀಪ್ ಪೈ, ಜನರಲ್ ಮ್ಯಾನೇಜರ್ ನಿತಿನ್ ಕೃಷ್ಣ (ಸೇಲ್ಸ್), ಹಾಗೂ ಶಶಿ ಕುಮಾರ್ (ಸರ್ವೀಸ್), ಸೇಲ್ಸ್ ಮ್ಯಾನೇಜರ್ ಹರೀಶ್ ಕುಮಾರ್, ಪೊಪ್ಯುಲರ್ ಸ್ವೀಟ್ಸ್ ಮಾಲೀಕ ನರಸಿಂಹ ಕಾಮತ್, ನಾಯರ್ ಕನ್ಷ್ಟ್ರಕ್ಷನ್ಸ್ ಮಾಲೀಕ ಸೂರಾಜ್ ನಾಯರ್, ಕೆ.ವಿ.ಶೆಣೈ ಪೆಟ್ರೋಲ್ ಪಂಪ್ ಮಾಲೀಕ ವಿಶ್ವಾಶ್ ಶೆಣೈ, ಮಾಸ್ಟರ್ ಪ್ಲಾನರಿಯ ನಿರ್ದೇಶಕರುಗಳಾದ ಆಕಾಶ್ ಮತ್ತು ಅಕ್ಷಯ್, ಉದ್ಯಮಿಗಳಾದ ಕರುಣಾಕರ್ ರೈ, ವಿಕ್ರಂ ಶೆಟ್ಟಿ ಅಂತರ ಸಹಿತ ಹಲವರು ಅತಿಥಿಗಳು ಹಾಗೂ ಗ್ರಾಹಕ ವರ್ಗ ಮತ್ತು ಸಿಬಂದಿಗಳು ಹಾಜರಿದ್ದರು.
ಉದ್ಯಮಿ ರಾಧಾಕೃಷ್ಣ ಇಟ್ಟಿಗುಂಡಿ ಮೊದಲ ಗ್ರಾಹಕ….
ವಿನೂತನ ಕ್ಯಾರೆನ್ಸ್ ಕ್ಲಾವಿಸ್ ಕಾರನ್ನು ಪ್ರಥಮ ಗ್ರಾಹಕ, ನಿಧಿ ಫುಡ್ ಪ್ರಾಡಕ್ಟ್ (ನಿತ್ಯ ಚಪಾತಿ) ಮಾಲೀಕ ರಾಧಕೃಷ್ಣ ಇಟ್ಟಿಗುಂಡಿ ಕುಟುಂಬಕ್ಕೆ, ಅತಿಥಿಗಳ ಮುಖೇನ ಕೀಲಿ ಹಸ್ತಾಂತರ ನಡೆಯಿತು. ಈ ವೇಳೆ ಎಲ್ಲಾ ಅತಿಥಿಗಳು ಇದ್ದರು.