ಒಕ್ಕಲಿಗ ಸ್ವ ಸಹಾಯ ಸಂಘಗಳ ವಿಟ್ಲ ಮುಡ್ನೂರು ಒಕ್ಕೂಟದ ತ್ರೈಮಾಸಿಕ ಸಭೆ

0

ವಿಟ್ಲ; ವಿಟ್ಲ ಮುಡ್ನೂರು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ ಮಾಡತ್ತಾರು ಜಾರಪ್ಪ ಗೌಡರ ಮನೆಯಲ್ಲಿ ಆ 31 ರಂದು ನಡೆಯಿತು.ಸಭೆಯಲ್ಲಿ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ವಿಟ್ಲವಲಯ ಇದರ ಅಧ್ಯಕ್ಷರು, ವಿಟ್ಲ ಮುಡ್ನೂರು ಗ್ರಾಮ ಒಕ್ಕೂಟದ ಅಧ್ಯಕ್ಷರಾದಂತಹ ನಾರಾಯಣ ಗೌಡ ಓಟೆ, ಗ್ರಾಮ ಒಕ್ಕೂಟದ ಉಪಾಧ್ಯಕ್ಷ ಚಂದ್ರಶೇಖರ ಗೌಡ ಗಿರಿನಿವಾಸ,ಒಕ್ಕಲಿಗ ಗೌಡ ಸೇವಾ ಸಂಘದ ಗ್ರಾಮ ಸಮಿತಿಯ ಅಧ್ಯಕ್ಷರಾದ ನವೀನ್ ಗೌಡ ಓಟೆ, ಒಕ್ಕಲಿಗ ಸ್ವ ಸಹಾಯ ಟ್ರಸ್ಟಿನ ಕಚೇರಿ ಪ್ರಬಂಧಕರಾದ ಸುನೀಲ್ ,ಮಹಿಳಾ ಘಟಕದ ಅಧ್ಯಕ್ಷರಾದ ಪ್ರೇಮಲತಾ,ಯುವ ಘಟಕದ ಅಧ್ಯಕ್ಷರಾದ,ಪ್ರವೀಣ್ ಕುಂಡಡ್ಕ.. ಒಕ್ಕೂಟದ ಕಾರ್ಯದರ್ಶಿ ಶಿಲ್ಪ ಮಾಡತ್ತಾರು,ಹಿರಿಯರಾದ ಜಾರಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಹಾಯಧನ ಚೆಕ್ ವಿತರಣೆ
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ನೀಡುವ ಸಹಾಯಧನ ಚೆಕ್ ಅನ್ನು ವಜ್ರ ಒಕ್ಕಲಿಗ ಸ್ವ ಸಂಘದ ಸದಸ್ಯರಾದಂತಹ ಉಮೇಶ್ ಇವರು ಆಕಸ್ಮಿಕ ಮರಣ ಹೊಂದಿದ ಕಾರಣ ಇವರ ಮನೆಯವರಿಗೆ ವಿತರಿಸಲಾಯಿತು.


ಗೌರವಾರ್ಪಣೆ ಕಾರ್ಯಕ್ರಮ
ಸಭೆಯಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ವಿಟ್ಲ ವಲಯದ ಪ್ರೇರಕರಾದ ಶ್ರುತಿ ವಿಸ್ಮಿತ್ ಬಲ್ನಾಡು ಇವರನ್ನು ಯಕ್ಷಗಾನದ ಸಾಧನೆಗಾಗಿ ಒಕ್ಕೂಟದ ವತಿಯಿಂದ ಪೇಟ ತೊಡಿಸಿ ಹಾರ, ಶಾಲು ಹಾಕಿ,ಫಲ ಪುಷ್ಪ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮವನ್ನು ಜಯಶ್ರೀ ಮಾಡುತ್ತಾರು ಸ್ವಾಗತಿಸಿ, ವಂದಿಸಿದರು.ನಿಮಿತ್ತ ಭಗವದ್ಗೀತೆಯ ಚಿಂತನ ವಾಚಿಸಿದರು.

LEAVE A REPLY

Please enter your comment!
Please enter your name here