ಉಪ್ಪಿನಂಗಡಿ: ಕ್ರಿಕೆಟ್ ಟೂರ್ನ್ಮೆಂಟ್ ಮಾಡಿ ಉಳಿದ ಹಣದಿಂದ ಅಂಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕ್ ಒದಗಿಸಿಕೊಟ್ಟು ಯುವಕರ ತಂಡವೊಂದು ಔದಾರ್ಯತೆ ತೋರಿ ಮಾದರಿಯಾಗಿದ್ದಾರೆ.
ಕೊಯಿಲದ ಗಂಡಿಬಾಗಿಲು ಜಿ.ಬಿ.ಫ್ರೆಂಡ್ಸ್ ಯುವಕರ ತಂಡ ಟೂರ್ನ್ಮೆಂಟ್ ನಡೆಸಿದ್ದು, ಇದರಿಂದ ಉಳಿದ 4 ಸಾವಿರ ರೂ.ಮೊತ್ತದಲ್ಲಿ 1 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಖರೀದಿಸಿ ಗಂಡಿಬಾಗಿಲು ಅಂಗನವಾಡಿ ಕೇಂದ್ರಕ್ಕೆ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಮೋಹಿನಿಯವರ ಮೂಲಕ ಅಂಗನವಾಡಿ ಕೇಂದ್ರಕ್ಕೆ ಟ್ಯಾಂಕ್ ಹಸ್ತಾಂತರಿಸಿದರು. ಯುವಕರ ತಂಡದ ಲತೀಫ್, ಜಮಾಲುದ್ದೀನ್, ಶಾಕಿರ್, ಮನ್ಸೂರ್, ನವಾಝ್, ಶಾಹಿಲ್, ಶಫಿಕ್, ಅವನೀಶ್, ಜುನೈದ್, ಅಂಗನವಾಡಿ ಸಹಾಯಕಿ ಐಸಾಬಿ ಉಪಸ್ಥಿತರಿದ್ದರು.