ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನೆಲ್ಯಾಡಿಯಲ್ಲಿ ನಡೆದ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಶ್ರೀರಾಮ ಶಾಲೆ ಉಪ್ಪಿನಂಗಡಿಯ ಪ್ರೌಢ ವಿಭಾಗದ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
ಈ ತಂಡದಲ್ಲಿ ಹೇಮಲತಾ ಮನ್ವಿತ ,ದೀಕ್ಷಾ ದೃತಿ ,ಪ್ರೀತಿ ಪ್ರಣಮ್ಯ ,ವೈಷ್ಣವಿ ,ವರ್ಷಿಣಿ, ಜೀವಿತ ,ವರಲಕ್ಷ್ಮಿ, ಕೃತಿ,. ಹರ್ಷಿತ ಭಾಗವಹಿಸಿದ್ದರು. ಹೇಮಲತಾ ಇವರು ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರಿಗೆ ದೈಹಿಕ ಶಿಕ್ಷಕಿ ಶ್ರೀರಕ್ಷಾ ತರಬೇತಿಯನ್ನು ನೀಡಿರುತ್ತಾರೆ.