ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ(ಐಟಿಐ) ಅಭಿಯಂತರರ ದಿನಾಚರಣೆ

0

ಕಡಬ: ಸರ್ ಎಂ ವಿಶ್ವೇಶ್ವರಯ್ಯ ನವರ ಜನುಮದಿನದ ಪ್ರಯುಕ್ತ ಬೆಥನಿ ಸಂಸ್ಥೆಯಲ್ಲಿ ಅಭಿಯಂತರರ ದಿನ (ಇಂಜಿನಿಯರ್ಸ್ ಡೇ) ಆಚರಿಸಲಾಯಯಿತು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಹರಿಪ್ರಸಾದ್ ರೈ ಅವರು ಸರ್ ಎಂ ವಿಶ್ವೇಶ್ವರಯ್ಯನವರ ಜೀವನಯಾನದ ಸಾಧನೆ ಮತ್ತು ದೇಶ-ವಿದೇಶಕ್ಕೆ ಕೊಟ್ಟ ಕೊಡುಗೆ ಬಗ್ಗೆ ಕಿರು ಪರಿಚಯವನ್ನು ನೀಡಿದರು. ಸಂಸ್ಥೆಯ ಪ್ರಾಚಾರ್ಯರು ಮಾತನಾಡಿ ಶುಭ ಹಾರೈಸಿದರು.


ಸರ್ ಎಂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಿ.ತ.ಅಧಿಕಾರಿ ಸುಬ್ರಾಯ ನಾಯಕ್ ರವರು ಕಾರ್ಯಕ್ರಮದ ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here