ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಸೆ.22 ರಂದು ಕಣ್ಣಿನ ಚಿಕಿತ್ಸಾ ವಿಭಾಗ ಶುಭಾರಂಭ

0

ನೇತ್ರ ತಜ್ಞರಾದ ಡಾ.ಅಶ್ವಿನ್ ಸಾಗರ್, ನೇತ್ರಾಧಿಕಾರಿ ಎಸ್.ಶಾಂತರಾಜ್ ಲಭ್ಯ

ನೆಲ್ಯಾಡಿ: ಇಲ್ಲಿನ ಹೊಸಮಜಲಿನಲ್ಲಿರುವ ಅಶ್ವಿನಿ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗೆ ಸಂಬಂಧಿಸಿದ ಆಪ್ತಲ್ಮೋಲಜಿ ವಿಭಾಗ ಸೆ.22ರಂದು ಶುಭಾರಂಭಗೊಳ್ಳಲಿದ್ದು, ಪುತ್ತೂರಿನ ಕಣ್ಣನ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಣ್ಣಿನ ಚಿಕಿತ್ಸಾಲಯದ ನೇತ್ರ ತಜ್ಞ ಡಾ.ಎಸ್.ಎಂ. ಅಶ್ವಿನ್ ಸಾಗರ್ ಮತ್ತು ನಿವೃತ್ತ ನೇತ್ರ ತಜ್ಞ ಎಸ್.ಶಾಂತರಾಜ್ ಅವರು ಲಭ್ಯರಿರಲಿದ್ದಾರೆ.


ಸೋಮವಾರ ಮತ್ತು ಗುರುವಾರದಂದು ಮುಂಗಡ ಕಾಯ್ದಿರಿಸಿದವರಿಗಾಗಿ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆವರೆಗೆ ಸಂದರ್ಶನಕ್ಕೆ ಅವಕಾಶ ಇರಲಿದೆ. ಹೆಸರು ನೋಂದಾಯಿಸಲು 8861648237 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here