ಸಂಪ್ಯ ಪುತ್ತೂರು ದಸರಾ ಮಹೋತ್ಸವ 3ನೇ ದಿನದ ಕಾರ್ಯಕ್ರಮ

0

ಹಿಂದುಗಳು ಒಟ್ಟಾಗಿ ಮಾಡಿದ ಆಚರಣೆಗಳು ನಿರಂತರ – ಯು ಪೂವಪ್ಪ

ಪುತ್ತೂರು: ಧಾರ್ಮಿಕ ಆಚರಣೆಗಳನ್ನು ಹಿಂದುಗಳು ಒಟ್ಟಾಗಿ ಮಾಡಿದಾಗ ಉತ್ತಮ ರೀತಿಯಲ್ಲಿ ನಡೆಯುತ್ತದೆ. ಅಂತಹ ಆಚರಣೆಗಳು ನಿರಂತರ ನಡೆಯುತ್ತವೆ ಎಂದು ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ ಅವರು ಹೇಳಿದರು.


ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿಯಿಂದ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ 23ನೇ ವರ್ಷದ ಪುತ್ತೂರು ದಸರಾ ಮಹೋತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಸಮಿತಿ ಸಲಹೆಗಾರ ಲೋಕೇಶ್ ಹೆಗ್ಡೆ ಉರ್ಲಾಂಡಿ ಅಧ್ಯಕ್ಷತೆ ವಹಿಸಿದರು.


ಗೌರವ
ಪುತ್ತೂರು ದಸರಾ ಉತ್ಸವದಲ್ಲಿ ಸುಮಧುರ ಸಂಗೀತ ಲಹರಿ ಕಾರ್ಯಕ್ರಮ ನೀಡಿದ ಗಾನಸಿರಿ ಕಲಾಕೇಂದ್ರ ಪುತ್ತೂರಿನ ಡಾ| ಕಿರಣ್ ಕುಮಾರ್ ಅವರನ್ನು ಪುತ್ತೂರು ದಸರಾ ಮಹೋತ್ಸವದಲ್ಲಿ ಗೌರವಿಸಲಾಯಿತು. ಪುತ್ತೂರು ದಸರಾ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಟಿ.ರಂಗನಾಥ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ದಸರಾ ಉತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಸ್ವಾಗತಿಸಿ, ರಿಕ್ತಾ ಉಮೇಶ್ ಪ್ರಾರ್ಥಿಸಿದರು. ಸಹ ಸಂಚಾಲಕ ರಾಜೇಶ್ ಬನ್ನೂರು ವಂದಿಸಿದರು. ಉಮೇಶ್ ಎಸ್.ಕೆ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here