ವಿಟ್ಲ: ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ಸೂರ್ಯನಾರಾಯಣ ನಿಧನ

0

ವಿಟ್ಲ:ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ,ಭಾರತೀಯ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ ಕಾರ್ಯಾಡಿ ನಿವಾಸಿ ಸೂರ್ಯನಾರಾಯಣ(ಸುರೇಶಣ್ಣ)ರವರು ಅನಾರೋಗ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.


ಸೂರ್ಯನಾರಾಯಣರವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಧರ್ಮನಗರದ ಶಾಖೆ ಆರಂಭವಾದಲ್ಲಿಂದ ಇಲ್ಲಿ ನಡೆದು ಬಂದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯಕರ್ತರಿಗೆ ಮಾದರಿಯಾಗಿದ್ದರು.ಸಂಘದ ತೃತೀಯ ವರ್ಷದ ಶಿಕ್ಷಣವನ್ನು ಮುಗಿಸಿ ಇಡ್ಕಿದು ಮಂಡಲ ಕಾರ್ಯವಾಹರಾಗಿ ಅವರು ಸೇವೆ ಸಲ್ಲಿಸಿದ್ದಾರೆ.ಮೃತರು ಪತ್ನಿ ಲತಾ, ಮಗ ಸುಮಿತ್, ಮಗಳು ಲಹರಿ ಅವರನ್ನು ಅಗಲಿದ್ದಾರೆ.


LEAVE A REPLY

Please enter your comment!
Please enter your name here