ರಾಮಕುಂಜ: ಇಲ್ಲಿನ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟದ ನಾಲ್ಕೂ ವಿಭಾಗದಲ್ಲೂ ದಕ್ಷಿಣ ಕನ್ನಡ ಜಿಲ್ಲಾ ತಂಡ ಫೈನಲ್ ಪ್ರವೇಶಿಸಿವೆ.

ಬಾಲಕರ 14 ಹಾಗೂ 17 ಮತ್ತು ಬಾಲಕಿಯರ 14 ಹಾಗೂ 17 ರ ವಿಭಾಗದಲ್ಲಿ ದ.ಕ.ಜಿಲ್ಲಾ ತಂಡ ಫೈನಲ್ ಪ್ರವೇಶಿಸಿವೆ. ಉಳಿದಂತೆ ಬಾಲಕರ 14 ರ ವಯೋಮಾನ ವಿಭಾಗದಲ್ಲಿ ಮಂಡ್ಯ, 17ರ ವಯೋಮಾನ ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲೆ ಫೈನಲ್ ಪ್ರವೇಶಿಸಿವೆ. ಬಾಲಕಿಯರ 14 ಹಾಗೂ 17ರ ವಯೋಮಾನ ವಿಭಾಗದಲ್ಲಿ ಉಡುಪಿ ಜಿಲ್ಲಾ ತಂಡ ಫೈನಲ್ ಪ್ರವೇಶಿಸಿವೆ. ಮಧ್ಯಾಹ್ನ 1.30ರಿಂದ ಫೈನಲ್ ಪಂದ್ಯ ನಡೆಯಲಿದೆ.