ವಿಟ್ಲ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ವಾರ್ಷಿಕೋತ್ಸವ

0

ವಿಟ್ಲ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ ) ವಿಟ್ಲ ಇದರ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳಾದ ವಿಟ್ಲ ಎ,  ವಿಟ್ಲ ಬಿ, ಒಕ್ಕೆತ್ತೂರು. ಇದರ ಇಪ್ಪತ್ತನೇ ವಾರ್ಷಿಕೋತ್ಸವ ಕಾರ್ಯಕ್ರಮ ವಿಟ್ಲ  ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.

ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ   ಕಾರ್ಯಕ್ರಮ ಉದ್ಘಾಟಿಸಿ  ವಿಟ್ಲ ತಾಲೂಕಿಗೆ 501 ನೇ  ಪ್ರಗತಿ ಬಂದು ಸ್ವಸಹಾಯ ಸಂಘದ   ಸದಸ್ಯರನ್ನು  ಸೇರ್ಪಡೆಗೊಳಿಸಿ, ಯೋಜನೆಯು ನಡೆದು ಬಂದ ಹಾದಿಯನ್ನು ವಿವರಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಕೃಷ್ಣಯ್ಯ ಬಲ್ಲಾಳ್ ವಹಿಸಿದ್ದರು.

ವಿಟ್ಲ ಜೇಸಿಸ್  ಆಂಗ್ಲ ಮಾಧ್ಯಮ ಶಾಲೆಯ  ಆಡಳಿತ ಅಧಿಕಾರಿ   ರಾಧಾಕೃಷ್ಣ  ಎರುಂಬು,  ವಿಠಲ ಪ್ರೌಢಶಾಲೆ ವಿಭಾಗದ ಉಪ ಪ್ರಾಂಶುಪಾಲ  ಕಿರಣ್ ಕುಮಾರ್,,  ಜನಜಾಗೃತಿ  ವೇದಿಕೆ  ವಿಟ್ಲವಲಯ ಸದಸ್ಯ ನಟೇಶ್ ವಿಟ್ಲ,   ವಿಟ್ಲ ಪದವಿಪೂರ್ವ ಕಾಲೇಜ್ ಉಪನ್ಯಾಸಕ  ಅಣ್ಣಪ್ಪ ಶಾಸ್ತಾನ, ಮೋನಪ್ಪ ಗೌಡ ಶಿವಾಜಿನಗರ,  ಯೋಜನಾಧಿಕಾರಿ    ಸುರೇಶ್ ಗೌಡ,   ಪ್ರಗತಿ ಬಂದು ಸ್ವಸಹ ಸಂಘಗಳು ಒಕ್ಕೂಟ  ವಿಟ್ಲ  ಅಧ್ಯಕ್ಷ  ಪ್ರಮೀಳಾ,    ಶೌರ್ಯ ವಿಪತ್ತು ಘಟಕದ  ಅಧ್ಯಕ್ಷ ಚಂದ್ರಹಾಸ,ಒಕ್ಕೂಟದ ಅಧ್ಯಕ್ಷರುಗಳಾದ  ವಿಶ್ವನಾಥ್ ವಿ, ಪ್ರವೀಣ್ ಕುಮಾರ್,  ಸವಿತಾ, ಗೋಪಾಲ ನೆಕ್ಕರೆ ಕಾಡು  ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ ಉತ್ತಮ ಪ್ರಗತಿ ಬಂದು ಸಂಘ, ಯೋಜನೆಯ ಹಿರಿಯ ಫಲಾನುಭವಿಗಳು, ಎಸ್ ಎಸ್ ಎಲ್ ಸಿ  ಮತ್ತು ಪಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ  ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು,ಒಕ್ಕೂಟಗಳ ನಿಕಟ ಪೂರ್ವ ಅಧ್ಯಕ್ಷರುಗಳನ್ನು  ಗೌರವಿಸಲಾಯಿತು. 

ವಿಟ್ಲ ವಲಯದ ಮೇಲ್ವಿಚಾರಕರಾದ ಜಗದೀಶ್ ಪೂಜಾರಿ ಸ್ವಾಗತಿಸಿ, ಜನಾರ್ದನ ಪದ್ಮಶಾಲಿ  ವಂದಿಸಿದರು. ಕೈರೊನ್ನಿಸ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ನಂತರ ಸಾಂಸ್ಕೃತಿಕ  ಕಾರ್ಯಕ್ರಮ ಜರಗಿತು

LEAVE A REPLY

Please enter your comment!
Please enter your name here