ಕನಕ ಜಯಂತಿ ಆಚರಣೆ, ವೈದೇಹಿ, ವೈಷ್ಣವಿ ಮಹಿಳಾ ಭಜನಾ ಮಂಡಳಿಯ ವಾರ್ಷಿಕೋತ್ಸವ

0

ಭಜನೆಗಾಗಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಯೊಂದು ತಂಡಕ್ಕೂ ಅವಕಾಶ- ಈಶ್ವರ ಭಟ್ ಪಂಜಿಗುಡ್ಡೆ
ಸಮಯ ಮಾಡಿಕೊಂಡ ಭಜನೆಯಲ್ಲಿ ಪಾಲ್ಗೊಳ್ಳಿ – ರಾಮಕೃಷ್ಣ ಕಾಟುಕುಕ್ಕೆ
ಭಜನೆಯಿಂದ ಕೂಡುವಿಕೆ -ಶಂಕರಿ ಶರ್ಮ
ಭಜನೆಯಿಂದ ಸನಾತನ ಹಿಂದು ಧರ್ಮ ಭದ್ರ – ಸಂತೋಷ್

ಪುತ್ತೂರು : ವೈದೇಹಿ ಮತ್ತು ವೈಷ್ಣವಿ ಮಹಿಳಾ ಭಜನಾ ಮಂಡಳಿ ಬೊಳುವಾರು ಇದರ ವತಿಯಿಂದ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಪುತ್ತೂರು ತಾಲೂಕು ಹಾಗು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಸಹಯೋಗದೊಂದಿಗೆ ಕನಕ ಜಯಂತಿ ಆಚರಣೆ ಮತ್ತು ಎರಡು ಸಂಸ್ಥೆಯ 13ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ನ.8ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.


ಪ್ರತಿಯೊಂದು ತಂಡಕ್ಕೂ ಅವಕಾಶ
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಮಾತನಾಡಿ, ಭಜನಾ ಮಂಡಳಿ ಜಾತ್ರೋತ್ಸವದ ಸಂದರ್ಭ ದೇವಸ್ಥಾನದ ವಿಷಯದಲ್ಲಿ ಎಷ್ಟೋ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರ ಶ್ರಮ ಯಾವತ್ತೂ ಕೂಡಾ ಇದೆ. ಇವತ್ತು ಕಾರ್ಯಕ್ರಮ ನಡೆಸಲು ಸರಿಯಾದ ವ್ಯವಸ್ಥೆ ಬೇಕಾಗಿದೆ. ಈ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯ ಜೀರ್ಣೋದ್ದಾರವನ್ನು 2 ವರ್ಷದೊಳಗೆ ಮಾಡಿ ರಾಜ್ಯವೇ ತಿರುಗಿ ನೋಡುವಂತೆ ಬ್ರಹ್ಮಕಲಶ ಮಾಡೋಣ. ಅದೇ ರೀತಿ ಭಜನೆಗಾಗಿ ಪ್ರತಿಯೊಂದು ತಂಡಕ್ಕೂ ದೇವಸ್ಥಾನದಲ್ಲಿ ಅವಕಾಶ ನೀಡುತ್ತೇವೆ. ಇಲ್ಲಿ ನಾನು ಅಧ್ಯಕ್ಷ ಆಗಿರಬಹುದು. ಆದರೆ ದೇವರ ಚಾಕ್ರಿ ಮಾಡುವುದು ಮಾತ್ರ. ನನ್ನಿಂದ ಏನಾದರೂ ತಪ್ಪಾಗಿದ್ದರೆ ತಿಳಿಸಿ, ತಿದ್ದಿಕೊಳ್ಳುವ ಕೆಲಸವನ್ನೂ ಮಾಡುತ್ತೇನೆ ಎಂದ ಅವರು ಜೀರ್ಣೋದ್ಧಾರ ಕಾರ್ಯಗಳಿಗೆ ಎಲ್ಲರು ಸಹಕರಿಸುವಂತೆ ಮನವಿ ಮಾಡಿದರು.


ಸಮಯ ಮಾಡಿಕೊಂಡ ಭಜನೆಯಲ್ಲಿ ಪಾಲ್ಗೊಳ್ಳಿ
ಸಭಾಧ್ಯಕ್ಷತೆ ವಹಿಸಿದ ದಾಸ ಸಂಕೀರ್ತನಾಕಾರ ಮಧ್ವಾದೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಅವರು ಮಾತನಾಡಿ, ನಾವು ಪ್ರತಿ ನಿತ್ಯ ಭಜನೆ ಮಾಡುತ್ತೇವೆ ಹಿಂದು ಹಬ್ಬಗಳಲ್ಲಿ ನಿರಂತರ ಭಜನೆ ಇರುತ್ತದೆ. ಭಜನೆಯ ಪುನರ್ ಜೀವನಕ್ಕೆ ಕಾವಂದರೂ ಅತ್ಯಂತ ಪ್ರಯತ್ನ ಮಾಡಿದ ಫಲವಾಗಿ ಇವತ್ತು ವಿಶೇಷವಾಗಿ ದೇಶಾದ್ಯಂತ ಭಜನೆ ನಡೆಯುತ್ತಿದೆ. ಭಜನೆ ಎಂದರೆ ಭಗವಂತ ಎಂದರ್ಥ. ಹಾಗಾಗಿ ಭಗವಂತನ ಕೊಂಡಿ ಗಟ್ಟಿಯಾಗಿರಲು ಭಜನೆಯಲ್ಲಿ ಪಾಲ್ಗೊಳ್ಳಬೇಕು. ಸಮಯ ಮಾಡಿಕೊಂಡು ಭಜನೆಯಲ್ಲಿ ಪಾಲ್ಗೊಳ್ಳಿ ಎಂದರು. ಸಂದರ್ಭ ವೈಷ್ಣವಿ ಮತ್ತು ವೈದೇಹಿ ತಂಡದಿಂದ ರಾಮಕೃಷ್ಣ ಕಾಟುಕುಕ್ಕೆ ದಂಪತಿಯನ್ನು ಗೌರವಿಸಿದರು.


ಭಜನೆಯಿಂದ ಕೂಡುವಿಕೆ

ಮುಖ್ಯ ಅತಿಥಿಯಾದ ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿಯಾಗಿರುವ ಸಾಹಿತಿ ಶಂಕರಿಶರ್ಮ ಅವರು ಮಾತನಾಡಿ, ಭಗವಂತನನ್ನು ಸಮೀಪಿಸಲು ಅತಿ ಹತ್ತಿರದ ಮಾರ್ಗ ಭಜನೆ. ಭಜನಾ ತಂಡದಿಂದ ಎಲ್ಲರ ಕೂಡುವಿಕೆ ಆಗುತ್ತಿದೆ ಎಂದರು.


ಭಜನೆಯಿಂದ ಸನಾತನ ಹಿಂದು ಧರ್ಮ ಭದ್ರ
ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್‌ನ ಸಮನ್ವಯ ಅಧಿಕಾರಿ ಸಂತೋಷ್ ಉಳಿಯಾರು ಅವರು ಮಾತನಾಡಿ ಸನಾತನ ಹಿಂದು ಧರ್ಮದ ಭದ್ರವಾಗಿರುವುದು ಭಜನಾ ಮಂಡಳಿ ಮತ್ತು ಅನುಷ್ಠಾನದಿಂದ ಮುಂದಿನ ದಿನವೂ ಇದು ಹೀಗೆ ಮುಂದುವರಿಯಲಿ ಎಂದರು. ವತ್ಸಲಾ ರಾಜ್ಞಿ ವರದಿ ಮಂಡಿಸಿದರು. ಉಷಾ ಜಯರಾಮ್, ಶಾಂತಿ, ಆಶಾ, ಇಂದಿರಾ, ಅನ್ನಪೂರ್ಣ ಅತಿಥಿಗಳನ್ನು ಗೌರವಿಸಿದರು. ವೈಷ್ಣವಿ ಭಜನಾ ಮಂಡಳಿಯ ಅಧ್ಯಕ್ಷೆ ಜ್ಯೋತಿ ನಾಯಕ್ ಸ್ವಾಗತಿಸಿದರು.ವೈದೇಹಿ ಭಜನಾ ಮಂಡಳಿಯ ಅಧ್ಯಕ್ಷೆ ಟಿ ಪ್ರೇಮಲತಾ ರಾವ್ ವಂದಿಸಿದರು. ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

ಕೀರ್ತನಾ ತರಬೇತಿ
ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಭಜನೋತ್ಸವ ಸಭಾ ಕಾರ್ಯಕ್ರಮದ ಆರಂಭದಲ್ಲಿ ಭಜನಾ ತರಬೇತಿ ಶಿಬಿರವು ಉಷಾ ಹೆಬ್ಬಾರ್ ಮಣಿಪಾಲ ಅವರಿಂದ ನಡೆಯಿತು. ಸುಮಾರು 9 ಕೀರ್ತನೆಗಳನ್ನು ಸುಲಭ ರೀತಿಯಲ್ಲಿ ಹಾಡುವ ಮೂಲಕ ತರಬೇತಿ ನೀಡಿದರು. ತಬಲದಲ್ಲಿ ಜಯಂತ ಉರ್ಲಾಂಡಿ, ಹಾರ್ಮೋನಿಯಂ ನಲ್ಲಿ ಲಿಂಗಪ್ಪ ಗೌಡ ಸಹಕರಿಸಿದರು.

LEAVE A REPLY

Please enter your comment!
Please enter your name here