ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ 20ಅಂಶಗಳ ಮಾಸಿಕ ಸಭೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 38 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಇಓ ಶುಭ ಕೆ ರವರಿಗೆ ಸನ್ಮಾನ ಕಾರ್ಯಕ್ರಮ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಂ.ಎಸ್ ರಘು ವಹಿಸಿದ್ದರು. ಬಲ್ನಾಡಿನ ನಿವೃತ್ತರಾದ ಸಿಇಒ ಶುಭ ಕೆ ರವರನ್ನು ಮುಖ್ಯ ಅತಿಥಿಗಳೊಂದಿಗೆ ಶಾಲು ಹೊದಿಸಿ ಫಲಪುಷ್ಪಗಳೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿ ಈರ್ವರ ಕಾರ್ಯವೈಖರಿಯನ್ನು ಅಭಿನಂದಿಸಿದರು. ಬಲ್ನಾಡಿನ ಸಹಕಾರ ಸಂಸ್ಥೆ ಅತ್ಯುತ್ತಮವಾಗಿ ಅಭಿವೃಧ್ದಿ ಹೊಂದಿದ ಬಗ್ಗೆ ಹರ್ಷ ವ್ಯಕ್ತಪಡಿಸಿ ಶುಭಹಾರೈಸಿದರು. ಬಲ್ನಾಡಿನ ನೂತನ ಸಿಇಓ ಕೀರ್ತನ್ ಶೆಟ್ಟಿ ಯವರಿಗೆ ಹೂಗುಚ್ಚ ನೀಡಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪುತ್ತೂರು ಶಾಖೆಯ ವ್ಯವಸ್ಥಾಪಕರಾದ ಹರೀಶ್ ರೈ ಶುಭಹಾರೈಸಿರು. ವೇದಿಕೆಯಲ್ಲಿ ಮಾರ್ಕೇಟಿಂಗ್ ಫೇಡರೇಷನ್ ವ್ಯವಸ್ಥಾಪಕ ಸಂಪತ್ ಕುಮಾರ್ ಉಪಸ್ಥಿತರಿದ್ದರು.
ನಿವೃತ್ತ ಸಿಇಓ ಶುಭ ಕೆ ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಶುಭ ಕೆ ರವರ ಬಗ್ಗೆ ಎಲ್ಲಾ ಸಿಇಓ ಗಳ ಪರವಾಗಿ ಇರ್ದೆ-ಬೆಟ್ಟಂಪಾಡಿ ಸಿಇಓ ರಾಮಯ್ಯ ರೈ ಶುಭ ಹಾರೈಸಿದರು.
ಈ ಸಮಾರಂಭದಲ್ಲಿ ವಲಯ ಮೇಲ್ವಿಚಾರಕರಾದ ವಸಂತ ಎಸ್, ಶರತ್ ಡಿ, ಪ್ರದೀಪ್ ಕೆ, ಮನೋಜ್ ಎಂ ಹಾಗೂ ಪುತ್ತೂರು ಮತ್ತು ಕಡಬ ತಾಲೂಕಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ನರಿಮೊಗರು ಸಂಘದ ಮದುಕರ್ , ನೆಲ್ಯಾಡಿಯ ದಯಾಕರ್ ರೈ ಆರ್ಯಾಪಿನ ಜಯಂತಿ, ಕೊಳ್ತಿಗೆಯ ಗಿರಿಜ, ಪಾಣಾಜೆಯ ಹರೀಶ್ ಕುಮಾರ್, ಕಾವು ಸಹಕಾರ ಸಂಘದ ಸಿಇಓ ಕೇಶವ ಮೂರ್ತಿ, ಕುಂಬ್ರದ ಭವಾನಿ ಬಿ.ಆರ್, ಬನ್ನೂರಿನ ರಾಧ ರೈ, ಉಪ್ಪಿನಂಗಡಿಯ ಶೋಭ, ಹೊಸಮಠದ ಸೋಮಸುಂದರ್ ಶೆಟ್ಟಿ, ಕೆದಂಬಾಡಿಯ ವಿನಯಕುಮಾರ್ ರೈ , ಬಿಳಿನೆಲೆಯ ಪುನೀತ್, ಕಡಬದ ಬಾಲಕೃಷ್ಣ, ಎಡಮಂಗಲದ ರಮೇಶ್ ಬಿ ಏನೆಕಲ್ಲಿನ ರತನ್, ಸುಬ್ರಹ್ಮಣ್ಯದ ಪ್ರಕಾಶ್, ಆಲಂಕಾರಿನ ಮನೋಹರ್ ಉಪಸ್ಥಿತರಿದ್ದರು.
ಸವಣೂರು ಸಹಕಾರ ಸಂಘದ ಸಿಇಓ ಚಂದ್ರಶೇಖರ್ ಪಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಮುಂಡೂರು ಸಹಕಾರಿ ಸಂಘದ ಸಿಇಓ ಜಯಪ್ರಕಾಶ್ ರೈ ವಂದಿಸಿದರು.
