ಬೆಳ್ತಂಗಡಿ :ಭಾರತೀಯ ಜೀವ ವಿಮಾ ನಿಗಮದ 66 ನೆ ಹುಟ್ಟುಹಬ್ಬದ ಪ್ರಯುಕ್ತ ಸೆ.1 ರಂದು ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ ವಿಮಾ ಸಪ್ತಾಹ ಉದ್ಘಾಟನೆ ಗೊಂಡಿತು.
ಈ ದಿನದ ಶಾಖೆಯ ಪ್ರಥಮ ಗ್ರಾಹಕರಾದ ತಿರುಮಲೇಶ್ವರ ನಡ ದೀಪ ಬೆಳಗಿಸಿ ಉದ್ಘಾಟಿಸಿದರು.
ಶಾಖಾಧಿಕಾರಿ ವಿ.ಎಸ್. ಕುಮಾರ್, ಅಭಿವೃದ್ಧಿ ಅಧಿಕಾರಿಗಳಾದ ಎ ಜಯದೇವ್ , ಎಂ.ವಿ ಶೆಟ್ಟಿ, ಟಿ.ಡಿ ರಾಘವೇಂದ್ರ, ಉದಯ ಶಂಕರ್ ಆಡಳಿತ ವಿಭಾಗದ ಸಿಬ್ಬಂದಿಗಲಾದ ಗಣೇಶ್ ಶಾಸ್ತ್ರಿ, ರತ್ನಾಕರ ಕಿಣಿ, ಮತ್ತು ಸಿಬ್ಬಂದಿಗಳು, ಅಖಿಲ ಭಾರತೀಯ ವಿಮಾ ಪ್ರತಿನಿಧಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎ.ಎಸ್ ಲೋಕೇಶ್ ಶೆಟ್ಟಿ, ವಿಮಾ ಸಲಹೆಗಾರರು ಪ್ರತಿನಿಧಿಗಳು, ಗ್ರಾಹಕರು ಉಪಸ್ಥಿತರಿದ್ದರು.