ನ್ಯಾಯತರ್ಪು: ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ(ರಿ) ರಕ್ತೇಶ್ವರಿ ಪದವು ಇದರ ವತಿಯಿಂದ ಬಾಲಕ ಬಾಲಕಿಯರಿಗೆ ಧರ್ಮಶಿಕ್ಷಣ ಮತ್ತು ಕುಣಿತ ಭಜನಾ ತರಬೇತಿಯು ರಕ್ತೆಶ್ವರಿ ಪದವು ಭಜನಾ ಮಂದಿರದಲ್ಲಿ ಉದ್ಘಾಟನೆಗೊಂಡಿತು.
ಅರವತ್ತಕ್ಕೂ ಮಿಕ್ಕಿ ಬಾಲಕ ಬಾಲಕಿಯರು ತರಬೇತಿಯಲ್ಲಿ ಹಾಜರಿದ್ದು, ಮುಂದಿನ ಪ್ರತೀ ಆದಿತ್ಯವಾರ ಬೆಳಿಗ್ಗೆ ಗಂಟೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಂದಿರದಲ್ಲಿ ತರಬೇತಿ ನೀಡಲಾಗುತ್ತದೆ. ಸ್ಳೀಯ ಹತ್ತು ವರ್ಷ ಮೇಲ್ಪಟ್ಟ ಬಾಲಕ ಬಾಲಕಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಭಜನಾ ಮಂಡಳಿಯ ವತಿಯಿಂದ ತಿಳಿಸಲಾಯಿತು.