ಪುತ್ತೂರು : ಕೆಮ್ಮಾಯಿ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ ಫೆ.3 ಮತ್ತು 4ರಂದು ನಡೆಯಲಿದ್ದು ಇದರ ಗೊನೆ ಮುಹೂರ್ತ ಜ.೨೭ರಂದು ನಡೆಯಿತು. ಪುರೋಹಿತ ಸದಾಶಿವ ಹೊಳ್ಳ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಗೊನೆ ಮುಹೂರ್ತ ನೆರವೇರಿಸಿದರು.
ದೇವಾಲಯದ ಆಡಳಿತ ಮೋಕ್ತೇಸರ ಶ್ರೀಪತಿ ಬೈಪಾಡಿತ್ತಾಯ, ಶ್ರೀಧರ ಬೈಪಾಡಿತ್ತಾಯ, ಶ್ರೀಹರಿ ಬೈಪಾಡಿತ್ತಾಯ, ನರೇಂದ್ರ ಪಡಿವಾಳ್ ಮೂಡಾಯೂರುಗುತ್ತು, ರಾಮಣ್ಣ ಗೌಡ ಬಡಾವು, ಈಶ್ವರ ಗೌಡ ಕೆಮ್ಮಾಯಿ, ಪ್ರವೀಣ್ ನಾಕ್ ಕೆಮ್ಮಾಯಿ, ಹೇಮಚಂದ್ರ ಕೆಮ್ಮಾಯಿ, ವಿಶ್ವನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.