ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೀರಾಜೆ ನೂರುಲ್ ಹುದಾ ಮಸ್ಜಿದ್, ಮದ್ರಸದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮದ್ರಸ ಸಮಿತಿ ಅಧ್ಯಕ್ಷ ಯೂಸುಫ್ ಧ್ವಜಾರೋಹಣ ನಡೆಸಿದರು. ಮದ್ರಸದ ಮುಖ್ಯ ಶಿಕ್ಷಕ ಅಬ್ದುಲ್ಲ ಮುಸ್ಲಿಯಾರ್ ವಿದ್ಯಾರ್ಥಿಗಳಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕುರಿತು ಅರಿವು ನೀಡಿದರು.
ಮಸೀದಿ ಮುದರ್ರಿಸ್ ಮುಹಮ್ಮದ್ ಜಾಬಿರ್ ಫೈಝಿ, ಮುಅಲ್ಲಿಂ ಇಸಾಕ್ ಮುಸ್ಲಿಯಾರ್, ಮದ್ರಸ ಸಮಿತಿ ಉಪಾಧ್ಯಕ್ಷ ಸಿದ್ದಿಕ್ ಎನ್., ಕಾರ್ಯದರ್ಶಿ ಪುತ್ತುಕುಂಞ, ಎಸ್.ಕೆ.ಎಸ್.ಎಸ್.ಎಫ್. ಕಾರ್ಯದರ್ಶಿ ಶರೀಫ್ ನೀರಾಜೆ, ಅಝೀಝ್ ಪಾಲೆತ್ತಡಿ ಮತ್ತಿತರರು ಉಪಸ್ಥಿತರಿದ್ದರು.