ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಬಿ.ಐತ್ತಪ್ಪ ನಾಯ್ಕ್ ಅವರು ಪುನರಾಯ್ಕೆಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ನಿವೃತ್ತ ಮುಖ್ಯಗುರು ಎ ತಿರುಮಲೇಶ್ವರ ಭಟ್ ಆಯ್ಕೆಗೊಂಡಿದ್ದಾರೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಮೇ 28ರಂದು ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಕೋಶಾಧಿಕಾರಿಯಾಗಿ ನಿವೃತ್ತ ಸಿಡಿಪಿಒ ಶಾಂತಿ ಟಿ ಹೆಗ್ಡೆ, ಉಪಾಧ್ಯಕ್ಷರಾಗಿ ನಿವೃತ್ತ ಉಪನ್ಯಾಸಕಿ ಪ್ರೊ. ಎಮ್.ವತ್ಸಲಾ ರಾಜ್ಞಿ, ನಿವೃತ್ತ ಎಸ್ಪಿ ಎಸ್.ರಾಮದಾಸ್ ಗೌಡ, ಜತೆಕಾರ್ಯದರ್ಶಿಯಾಗಿ ನಿವೃತ್ತ ಉಪತಹಸೀಲ್ದಾರ್ ಶಶಿಕಲಾ ಎನ್, ಸಂಘಟನಾ ಕಾರ್ಯದರ್ಶಿಯಾಗಿ ನಿವೃತ್ತ ಉಪತಹಸೀಲ್ದಾರ್ ಬಿ.ಜಗನ್ನಾಥ ರೈ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯಗುರು ಲೀನಾ ಫುರ್ಟಾಡೊ, ಆಂತರಿಕ ಲೆಕ್ಕಪರಿಶೋಧಕ ಎಂ.ಶರತ್ ಕುಮಾರ್ ರಾವ್, ಅನುಷ್ಠಾನ ಸಮಿತಿ ಸಂಚಾಲಕರಾಗಿ ಡಾ. ವಿಶ್ವನಾಥ ಶೆಟ್ಟಿ, ವೈದ್ಯಕೀಯ ಸಲಹೆಗಾರರಾಗಿ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಪತಿ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ನಿರ್ಮಲಾ ಬಿ.ಕೆ, ಎನ್.ನಾರ್ಣಪ್ಪ ನಾಯ್ಕ್, ಶಿವಾನಂದ ಎನ್, ಕೆ.ಸುಂದರ ನಾಯ್ಕ್, ಬಿ.ಸೂರಪ್ಪ ಗೌಡ, ಶಂಕರಿ ಎಮ್ ಎಸ್ ಭಟ್, ಬಿ.ರಾಧಾಕೃಷ್ಣ ಭಟ್, ಜಯಂತಿ ಪಿ ನಾಯ್ಕ್, ಯಶೋದಾ ಪಿ ರಾವ್, ಕೆ.ಎಮ್ ದೇವದಾಸ ಗೌಡ, ಎ.ಗಂಗಯ್ಯ ಗೌಡ, ಸದಾಶಿವ ರೈ ಎಸ್.ಎನ್, ಯು.ಮಹಮ್ಮದ್ ಹಾಜಿ, ನಾಗಪ್ಪ ಗೌಡ ಬೊಮ್ಮೆಟ್ಟಿ, ಕೆ.ಸರೋಜಿನಿ ಮೇನಾಲ, ಜಿ.ಐತ್ತಪ್ಪ ನಾಯ್ಕ್ ಅವರು ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.