![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಬಡಗನ್ನೂರು: ದ.ಕ.ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಈಶ್ವರಮಂಗಲ ಮತ್ತು ಬಡಗನ್ನೂರು ಗ್ರಾಮ ಪಂಚಾಯತ್ ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಪರೀಕ್ಷೆ ಶಿಬಿರವು ಜೂ 18 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಕೆ.ಎಸ್ ಹೆಗಡೆ ಆಸ್ಪತ್ರೆಯ ನುರಿತ ನೇತ್ರ ತಜ್ಞರ ತಂಡದವರಿಂದ ನೇತ್ರ ಪರೀಕ್ಷೆ ನಡೆಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ, ಸದಸ್ಯ ರವಿರಾಜ ರೈ ಸಜಂಕಾಡಿ, ಪಡುವನ್ನೂರು ಸಿ.ಹೆಚ್.ಒ ದಿವ್ಯ, ಬಡಗನ್ನೂರು ಅರೋಗ್ಯ ಸಹಾಯಕಿ ನಂದಿನಿ, ಪಡುವನ್ನೂರು ಆರೋಗ್ಯ ಸಹಾಯಕಿ ವನಿತಾ ಹಾಗೂ ಆಶಾ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಭಾಗವಹಿಸಿದರು. ಬೆಳಗ್ಗೆ 10 ರಿಂದ 1 ರತನಕ ನೇತ್ರ ತಪಾಸಣೆ ನಡೆಯಿತು. ಶಿಬಿರದಲ್ಲಿ 120 ಜನರು ಸದುಪಯೋಗ ಪಡೆದು ಕೊಂಡರು.
![](https://puttur.suddinews.com/wp-content/uploads/2022/06/IMG_20220618_110542.jpg)