ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಡ್ಡಗದ್ದೆ ಒಕ್ಕೂಟದ ಸೇವಾಪ್ರತಿನಿಧಿಯಾಗಿದ್ದ ವರ್ಗಾವಣೆಗೊಂಡ ಸವಿತಾ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಡ್ಡಗದ್ದೆ ಒಕ್ಕೂಟದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಜೂ.19ರಂದು ಕಳಾರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಅಡ್ಡಗದ್ದೆ ಒಕ್ಕೂಟದ ಅಧ್ಯಕ್ಷ ಆನಂದ ಗೌಡ ಕೋಂಕ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಡಬ ವಲಯದ ಮೇಲ್ವಿಚಾರಕ ರವಿಪ್ರಸಾದ್ ಶುಭಹಾರೈಸಿದರು. ವೇದಿಕೆಯಲ್ಲಿ ಅಡ್ಡಗದ್ದೆ ಒಕ್ಕೂಟದ ನೂತನ ಸೇವಾ ಪ್ರತಿನಿಧಿ ನಳಿನಿ, ಅಡ್ಡಗದ್ದೆ ಒಕ್ಕೂಟದ ಕೋಶಾಧಿಕಾರಿ ಜೈನಾಬಿ, ಪದಾಧಿಕಾರಿಗಳಾದ ರೂಪ, ಲೋಲಾಕ್ಷಿ, ಅಪ್ಸಾ, ಮೋಹನ್ ಕೊಯಿಲ, ಶ್ರೀಧರ ಗೌಡ, ದೇವಣ್ಣ ಗೌಡ ಸಂಪಡ್ಕ ಉಪಸ್ಥಿತರಿದ್ದರು. ವರ್ಗಾವಣೆಗೊಳ್ಳುತ್ತಿರುವ ಸವಿತಾರವರನ್ನು ಶಾಲು, ಹಾರ, ಕಲ್ಪವೃಕ್ಷ ಗಿಡ, ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಲಾಯಿತು. ಒಕ್ಕೂಟದ ಕಾರ್ಯದರ್ಶಿ ಹೇಮಲತಾ ಜೆ ರೈ ಕಾರ್ಯಕ್ರಮ ನಿರೂಪಿಸಿದರು. ಶ್ರೀಕಂಠ ಪ್ರಗತಿ ಬಂಧು ತಂಡದ ಕುಶಾಲಪ್ಪ ಗೌಡ ಸ್ವಾಗತಿಸಿದರು. ಶ್ರೀದುರ್ಗಾ ತಂಡದ ಸದಸ್ಯೆ ಮಾಲಿನಿ ವಂದಿಸಿದರು.